ಉತ್ತರಕನ್ನಡ: ಮಗುವಿಗೆ ಜನ್ಮ ಕೊಡುವುದಷ್ಟೇ ಅಲ್ಲ, ಅದು ಬೆಳೆದು ಒಂದು ಹಂತಕ್ಕೆ ಬರುವವರೆಗೂ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯ. ಪಾಲಕರು ಮಾಡುವ ಒಂದು ಸಣ್ಣ ಎಡವಟ್ಟು ಅಥವಾ ನಿರ್ಲಕ್ಷ್ಯ ಏನು ಅರಿಯದ ಮಗುವಿನ ಪ್ರಾಣವನ್ನೇ ಕಸಿಯುತ್ತದೆ ಎನ್ನುವುದಕ್ಕೆ ಈ ಒಂದು ತಾಜಾ ಘಟನೆ ದುರಂತ ಉದಾಹರಣೆಯಾಗಿದೆ.
ಹೌದು, ಮೊಬೈಲ್ ಚಾರ್ಜರ್ ಬಾಯಿಯಲ್ಲಿ ಹಾಕಿಕೊಂಡ ಪರಿಣಾಮ ವಿದ್ಯುತ್ ಶಾಕ್ನಿಂದ 8 ತಿಂಗಳ ಮಗು ಮೃತಪಟ್ಟ ಘಟನೆ ಉತ್ತರ ಕನ್ನಡದ ಕಾರವಾರ ತಾಲೂಕಿನ ಸಿದ್ದರದಲ್ಲಿ ನಡೆದಿದೆ. ಮೊಬೈಲ್ ಅನ್ನು ಚಾರ್ಜ್ ಪಿನ್ನಿಂದ ತೆಗೆದ ಬಳಿಕ ಸ್ವಿಚ್ ಆಫ್ ಮಾಡುವ ಅಭ್ಯಾಸ ಕೆಲವರಿಗೆ ಇರುವುದಿಲ್ಲ. ಈ ಒಂದು ದುರಾಭ್ಯಾಸ ಒಂದು ಮಗುವಿನ ಪ್ರಾಣವನ್ನೇ ತೆಗೆದಿದೆ.
ಸಿದ್ದರ ಗ್ರಾಮದ ಹೆಸ್ಕಾಂ ಗುತ್ತಿಗೆ ಆಧಾರದ ಉದ್ಯೋಗಿ ಸಂತೋಷ ಹಾಗೂ ಸಂಜನಾ ಅವರ 8 ತಿಂಗಳ ಹೆಣ್ಣು ಮಗು ಸಾನಿಧ್ಯ ಇದೀಗ ವಿದ್ಯುತ್ ಶಾಕ್ನಿಂದ ಮೃತಪಟ್ಟಿದೆ. ಮೊಬೈಲ್ ಚಾರ್ಜ್ ಹಾಕಿ ತೆಗೆದ ನಂತರ ಪಾಲಕರು ಸ್ವಿಚ್ ಆಫ್ ಮಾಡಿರಲಿಲ್ಲ. ಮಕ್ಕಳು ಏನೇ ಕಂಡರು ಮೊದಲು ಬಾಯಿಗೆ ಹಾಕಿಕೊಳ್ಳುತ್ತವೆ. ಅದೇ ರೀತಿ ಮಗು ಸಾನಿಧ್ಯ ಕೂಡ ಚಾರ್ಜರ್ ಪಿನ್ ಅನ್ನು ಬಾಯಲ್ಲಿ ಹಾಕಿಕೊಂಡಾಗ ವಿದ್ಯುತ್ ಶಾಕ್ನಿಂದ ದುರಂತ ಸಂಭವಿಸಿದೆ.
ತಕ್ಷಣ ಬೈಕ್ನಲ್ಲಿ ಮಗುವನ್ನು ಕ್ರಿಮ್ಸ್ ಆಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯದಲ್ಲೇ ಮಗು ಮೃತಪಟ್ಟಿದೆ. ಈ ಸಂಬಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)
ಸೀಮಾ ಹೈದರ್ಳನ್ನು ಪಾಕಿಸ್ತಾನಕ್ಕೆ ವಾಪಸ್ ಕಳಿಸ್ತೀರಾ? ಸಿಎಂ ಯೋಗಿ ಆದಿತ್ಯನಾಥ್ ಕೊಟ್ಟ ಉತ್ತರ ಹೀಗಿತ್ತು….
ನಿರ್ಮಾಣ ಹಂತದಲ್ಲಿದ್ದ ಕ್ರೀಡಾಂಗಣದ ಕಬ್ಬಿಣದ ಮೇಲ್ಛಾವಣಿ ಕುಸಿತ; ಅನುಮತಿ ಪಡೆಯದೇ ಕೆಲಸ ಮಾಡುತ್ತಿದ್ದ ಆರೋಪ!