ನವದೆಹಲಿ: ಒಂದು ದೋಸೆಯಲ್ಲಿ 8 ಜಿರಲೆಗಳು…ಅಬ್ಬಾ! ದೆಹಲಿಯ ಮದ್ರಾಸ್ ಕಾಫಿ ಹೌಸ್ನ ಈ ವಿಡಿಯೋವನ್ನು ನೋಡಿ ಜನರು ಆಶ್ಚರ್ಯಚಕಿತರಾದರು. ಅಷ್ಟೇ ಅಲ್ಲ, ದುಬಾರಿ ಹೋಟೆಲ್ಗಳಲ್ಲಿ ಟೈಫಾಯಿಡ್ ಚಿಕಿತ್ಸೆ ಉಚಿತ ಎಂದು ತೆಗಳುತ್ತಿದ್ದಾರೆ.
ದೇಶದ ರಾಜಧಾನಿ ದೆಹಲಿಯಿಂದ ಈ ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದ್ದು, ಕನ್ನಾಟ್ ಪ್ಲೇಸ್ನಲ್ಲಿರುವ ಪ್ರಸಿದ್ಧ ಮದ್ರಾಸ್ ಕಾಫಿ ಹೌಸ್ನಲ್ಲಿನ ದೋಸೆಯಲ್ಲಿ 8 ಸತ್ತ ಜಿರಲೆಗಳು ಪತ್ತೆಯಾಗಿವೆ. ಅದರ ವಿಡಿಯೋ ಈಗ ವೈರಲ್ ಆಗಿದೆ. ಈ ವಿಡಿಯೋವನ್ನು ಇಶಾನಿ ಎಂಬ ಬಳಕೆದಾರರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಮಾರ್ಚ್ 7 ರಂದು ಈ ಘಟನೆ ಸಂಭವಿಸಿದೆ ಎಂದು ಇಶಾನಿ ಹೇಳಿದ್ದಾರೆ. “ನಾನು ಮಧ್ಯಾಹ್ನ 1 ಗಂಟೆ ಸುಮಾರಿಗೆ ನನ್ನ ಸ್ನೇಹಿತನೊಂದಿಗೆ ಕನ್ನಾಟ್ ಪ್ಲೇಸ್ನಲ್ಲಿರುವ ಮದ್ರಾಸ್ ಕಾಫಿ ಹೌಸ್ಗೆ ಹೋದೆ. ಅಲ್ಲಿ ನಾವು ಎರಡು ದೋಸೆಗಳನ್ನು ಆರ್ಡರ್ ಮಾಡಿದೆವು, ಆದರೆ ನಾನು ದೋಸೆಗಳನ್ನು ತಿಂದಾಗ, ಅವು ವಿಚಿತ್ರವಾದ ರುಚಿಯನ್ನು ಹೊಂದಿದ್ದವು. ಸರಿಯಾಗಿ ನೋಡಿದಾಗ ಅದರಲ್ಲಿ ಸತ್ತ ಜಿರಳೆ ಕಂಡು ಬಂತು. ದೋಸೆಯಲ್ಲಿ ಒಟ್ಟು ಎಂಟು ಸತ್ತ ಜಿರಳೆಗಳನ್ನು ಕಂಡೆ. ಇದರಿಂದ ನನ್ನ ಹೃದಯದಲ್ಲಿ ಕಸಿವಿಸಿಯಾಯಿತು” ಎಂದು ಪೋಸ್ಟ್ ಜೊತೆಗೆ ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲ, ಕನ್ನಾಟ್ ಪ್ಲೇಸ್ನಲ್ಲಿರುವ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ಇಶಾನಿ ಹೇಳಿದ್ದಾರೆ. “ಇಲ್ಲಿ ಎಲ್ಲಾ ವಿವರಗಳನ್ನು ಸಾಕ್ಷಿ ಸಮೇತ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನನಗೆ ಅಧಿಕಾರಿಗಳ ಮೇಲೆ ಸಿಟ್ಟು, ನಿರಾಸೆ ಇದೆ. ಏನಾದರೂ ಕ್ರಮ ಕೈಗೊಳ್ಳುವವರೆಗೂ ನಾನು ಸುಮ್ಮನಿರುವುದಿಲ್ಲ” ಎಂದರು.
View this post on Instagram
“ಪ್ರತಿ ಗಂಟೆಗೆ 30 ಗ್ರಾಹಕರು ಬರುವ ಇಂತಹ ಪ್ರತಿಷ್ಠಿತ ರೆಸ್ಟೊರೆಂಟ್ ಹೇಗೆ ನಿರ್ಲಕ್ಷ್ಯ ವಹಿಸುತ್ತದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಅಡುಗೆ ಮನೆಯಿಂದ ದುರ್ವಾಸನೆ ಬರುತ್ತಿತ್ತು. ಅದರ ಅರ್ಧಭಾಗದಲ್ಲಿ ಛಾವಣಿ ಇರಲಿಲ್ಲ ” ಎಂದು ಇಶಾನಿ ಹೇಳಿದ್ದಾರೆ.
“ನಾನು ವಿಡಿಯೋ ಮಾಡುವುದನ್ನು ನಿಲ್ಲಿಸಲು ನನಗೆ ಪರಿಹಾರ ನೀಡುವುದಾಗಿ ರೆಸ್ಟೋರೆಂಟ್ ಮಾಲೀಕರು ನನಗೆ ಹೇಳುತ್ತಲೇ ಇದ್ದರು. ಅಂತಿಮವಾಗಿ ನಾನು ಅವರಿಗೆ ಸರಿದೂಗಿಸಲು ಒಂದು ಮಾರ್ಗವಿದೆ. ಸಸ್ಯಾಹಾರಿ ಆಗಿದ್ದರೆ ನನ್ನ ಮುಂದೆ ಕುಳಿತು ಈ 8 ಜಿರಳೆಗಳನ್ನು ತಿನ್ನಬಹುದು. ಆಗ ನನಗೆ ಯಾವುದೇ ಸಮಸ್ಯೆ ಇಲ್ಲ ಎಂದೆ” ಎಂದು ಇಶಾನಿ ಬರೆದುಕೊಂಡಿದ್ದಾರೆ.
ಬಳಕೆದಾರರು ಹೇಳಿದ್ದೇನು?
ಇಶಾನಿ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡ ನಂತರ ಅದು ವೈರಲ್ ಆಗಲು ಪ್ರಾರಂಭಿಸಿತು. ಈ ಬಗ್ಗೆ ಬಳಕೆದಾರರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೆಲವು ಬಳಕೆದಾರರು ರೆಸ್ಟೋರೆಂಟ್ನ ಪರವಾನಗಿಯನ್ನು ಪರಿಶೀಲಿಸಲು ಕೇಳಿದರೆ, ಇತರರು ಪೊಲೀಸ್ ಠಾಣೆಗೆ ಹೋಗಲು ಸಲಹೆ ನೀಡಿದರು. ಕೆಲವು
ಹೀಗಿವೆ ಕಾಮೆಂಟ್ಗಳು …
ಇದು ಅತಿಯಾಯಿತು, ಅವರು ಖಂಡಿತವಾಗಿಯೂ ಜವಾಬ್ದಾರರಾಗಿರುತ್ತಾರೆ.
ಮೋಸ ಮಾಡಿದ್ದಕ್ಕೆ ತಕ್ಕ ಪಾಠ ಕಲಿಸಿ.
ದಯವಿಟ್ಟು ಅವರ ಪರವಾನಗಿಯನ್ನು ಪರಿಶೀಲಿಸಿ.
ಸಾಕ್ಷಿ ಸಮೇತ ಬಯಲಿಗೆಳೆಯುವ ಮೂಲಕ ದೊಡ್ಡ ಕೆಲಸ ಮಾಡಿದ್ದೀರಿ.
ನಾನು ಅಲ್ಲಿ ತಿನ್ನುವ ಬಗ್ಗೆ ಯೋಚಿಸುತ್ತಿದ್ದೆ. ಆದರೆ ಇದು ತುಂಬಾ ಭಯಾನಕವಾಗಿದೆ.
ಇಂಥವರ ವಿರುದ್ಧ ನ್ಯಾಯಾಲಯದ ಮೊರೆ ಹೋಗಬೇಕು.
ನೀವು ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ…ಅಂತಹ ಸಮಸ್ಯೆಗಳ ಬಗ್ಗೆ ಹೆಚ್ಚಿನ ಜನರು ಮೌನವಾಗಿರುತ್ತಾರೆ. ಯಾರಾದರೂ ಧ್ವನಿ ಎತ್ತಲು ಇಷ್ಟಪಡುವುದಿಲ್ಲ. ದಯವಿಟ್ಟು ಇಂತಹ ಧೈರ್ಯದ ಕಾರ್ಯಗಳನ್ನು ಮಾಡುತ್ತಾ ಇರಿ…ಬಹುಶಃ, ಇದು ಜನರಿಗೆ ಅರಿವು ಮೂಡಿಸುತ್ತದೆ.
ದುಬಾರಿ ಹೋಟೆಲ್ಗಳಲ್ಲಿ ಟೈಫಾಯಿಡ್ಗೆ ಉಚಿತ ವ್ಯವಸ್ಥೆ ಎಂದೆಲ್ಲಾ ಪ್ರತಿಕ್ರಿಯೆಗಳನ್ನು ಕೊಟ್ಟಿದ್ದಾರೆ.
ರೈಲ್ವೆ ವಲಯದಲ್ಲಿ ಸೇವೆ ಸಲ್ಲಿಸಲು ಅವಕಾಶ; ಎಸ್ಐ, ಕಾನ್ಸ್ಟೇಬಲ್, ಟೆಕ್ನೀಷಿಯನ್ಗಳಿಗೆ ಕರೆ