More

    ಸರ್ಕಾರಿ ಅನುದಾನಿತ ಗೋಶಾಲೆಯಲ್ಲಿ 78 ಹಸುಗಳ ನಿಗೂಢ ಸಾವು!

    ಜೈಪುರ : ಸರ್ಕಾರಿ ಅನುದಾನಿ ಗೋಶಾಲೆಯಲ್ಲಿ ಒಂದೇ ದಿನ 78 ಹಸುಗಳು ನಿಗೂಢವಾಗಿ ಮೃತಪಟ್ಟಿವೆ. ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಈ ದುರಂತ ಸಂಭವಿಸಿದೆ ಎಂದು ಪಶು ಸಂಗೋಪನಾ ಇಲಾಖೇಯ ಜಂಟಿ ನಿರ್ದೇಶಕ ಡಾ. ಜಗದೀಶ್ ಶನಿವಾರ ತಿಳಿಸಿದ್ದಾರೆ.

    ಸರ್ದರ್ಶಹರ್​ ಎಂಬಲ್ಲಿಯ ಬಿಲ್ಯುಬಾಸ್ ರಾಮಪುರ ಗ್ರಾಮದಲ್ಲಿರುವ ಗೋಶಾಲೆಯಲ್ಲಿ ಈ ದುರಂತ ಸಂಭವಿಸಿದೆ. ಮೇಲ್ನೋಟಕ್ಕೆ ಫುಡ್​ ಪಾಯ್ಸನಿಂಗ್ ಆಗಿ ಹಸುಗಳು ಮೃತಪಟ್ಟಿರುವ ಸಾಧ್ಯತೆ ಗೋಚರಿಸಿದೆ. ಅಲ್ಲಿದ್ದ ಮೇವನ್ನು ಸಂಗ್ರಹಿಸಿ ಲ್ಯಾಬ್​ಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸಾವಿಗೆ ಕಾರಣವೇನು ಎಂಬುದು ಗೊತ್ತಾಗಲಿದೆ ಎಂದು ಡಾ.ಜಗದೀಶ್ ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ : ಜೆ&ಕೆ ಬ್ಯಾಂಕ್ ಹಣ ಅಕ್ರಮ – ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ವಿವಿಧೆಡೆ ದಾಳಿ

    ಭಗವಾನ್ ಶ್ರೀಕೃಷ್ಣ ಮತ್ತು ಗೋವುಗಳಿಗೆ ಸಂಬಂಧಿಸಿ ಗೋಸಪ್ತಮಿ ಹಬ್ಬ ಆಚರಣೆಯ ಒಂದು ದಿನ ಮುಂಚಿತವಾಗಿ ನಡೆದ ಈ ದುರಂತ ಗ್ರಾಮಸ್ಥರನ್ನು ದುಃಖಕ್ಕೀಡುಮಾಡಿದೆ. (ಏಜೆನ್ಸೀಸ್)

    ಮತಾಂತರ ತಂದಿಟ್ಟ ಅವಾಂತರ – ತಾಯಿಯ ಅಂತ್ಯಸಂಸ್ಕಾರದ ವೇಳೆ ನಡೆಯಿತು ಫೈಟಿಂಗ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts