More

    ಅಪಘಾತ ಆಗಿದೆ ಅಂತ ಕರೆ ಮಾಡಿದ್ರೆ ಕಾಪಾಡುವ ಬದಲು ಪತಿಗೆ ಸಾವಿನ ದಾರಿ ತೋರಿದ ಪತ್ನಿ: ಪ್ರೀತಿ ಕೊಂದ ಕಿರಾತಕಿ?

    ಬಾಗಲಕೋಟೆ: ಜುಲೈ 2ರಂದು ಹುನಗುಂದ ತಾಲೂಕಿನ ಕಮತಗಿ ಕ್ರಾಸ್ ಬಳಿ ನಡೆದಿದ್ದ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಸಾವಿನ ಹಿಂದಿರುವ ಭಯಾನಕ ರಹಸ್ಯವನ್ನು 16 ದಿನಗಳ ಬಳಿಕ ಬಾಗಲಕೋಟೆ ಪೊಲೀಸರು ಹೊರ ಜಗತ್ತಿಗೆ ತೆರೆದಿಟ್ಟಿದ್ದಾರೆ.

    ಅಪಘಾತದಲ್ಲಿ ಪ್ರವೀಣ ಸೇಬಣ್ಣವರ(30) ಎಂಬುವರು ಮೃತಪಟ್ಟಿದ್ದರು. ಆರಂಭದಲ್ಲಿ ಇದನ್ನು ಅಪಘಾತವೆಂದೇ ನಂಬಲಾಗಿತ್ತು. ಆದರೆ, ಈಗ ಅಸಲಿ ವಿಚಾರ ಬೆಳಕಿಗೆ ಬಂದಿದ್ದು, ಇದೊಂದು ಅಪಘಾತವಲ್ಲ, ಪೂರ್ವ ನಿಯೋಜಿತೆ ಕೊಲೆ ಎಂಬುದು ಪೊಲೀಸ್​ ತನಿಖೆಯಲ್ಲಿ ಬಟಾಬಯಲಾಗಿದೆ.

    ಅಂದಹಾಗೆ ಆರೋಪಿ ಬೇರೆ ಯಾರೂ ಅಲ್ಲ, ಪ್ರೀತಿಸಿ ಮದುವೆಯಾಗಿದ್ದ ಪತ್ನಿ ನಿತ್ಯಾ. ಪ್ರೇಮ ವಿವಾಹವಾದರೂ ಬೇರೊಬ್ಬನ ಜೊತೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದ ಆರೋಪಿ ನಿತ್ಯಾ, ಆತನೊಂದಿಗೆ ಸೇರಿಕೊಂಡು ಪ್ಲಾನ್​ ಮಾಡಿ ಗಂಡನನ್ನೇ ಮುಗಿಸಿದ್ದಾಳೆ.

    ಕಮತಗಿ ಕ್ರಾಸ್ ಬಳಿ ಜುಲೈ 2 ರಂದು ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿತ್ತು. ಕಾರಿನಲ್ಲಿ ಬಂದ ಪತ್ನಿ ಹಾಗೂ ಪ್ರಿಯಕರ ರಾಘವೇಂದ್ರ, ಪ್ರವೀಣ ಸೇಬಣ್ಣವರಗೆ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದರು. ಈ ವೇಳೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಸೇಬಣ್ಣ, ತನ್ನ ಪತ್ನಿಗೆ ಕರೆ ಮಾಡಿ ನನಗೆ ಅಪಘಾತವಾಗಿದೆ ಎಂದಿದ್ದ. ಇದನ್ನು ತಿಳಿದ ನಿತ್ಯಾ, ಮತ್ತೆ ಕಾರು ತಿರುಗಿಸಿಕೊಂಡು ಬಂದು ಡಿಕ್ಕಿ ಹೊಡೆಸಿದ್ದಳು. ಕೊಲೆ‌ ಖಚಿತವಾದ ಬಳಿಕ ಇಬ್ಬರು ಎಸ್ಕೇಪ್​ ಆಗಿದ್ದರು.

    ಮೇಲ್ನೋಟಕ್ಕೆ ಅಪಘಾತದಲ್ಲಿ ಮೃತಪಟ್ಟ ರೀತಿ ಶವ ಪತ್ತೆಯಾಗಿತ್ತು. ಆದರೆ, ಬೈಕ್ ಬಿದ್ದ ಜಾಗ ಹಾಗೂ ಶವದ‌ ಮೇಲಿನ ಗಾಯ ಕೊಲೆ ಶಂಕೆ ಮೂಡಿಸಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಅಮೀನಗಡ ಪೊಲೀಸರಿಗೆ ಅಸಲಿ ಸಂಗತಿ ತಿಳಿದಿದೆ. ಪತ್ನಿ ನಿತ್ಯಾ‌ ಮೇಲೆ ಸಂಶಯ ಮೂಡಿ, ತೀವ್ರ ವಿಚಾರಣೆ ನಡೆಸಿದಾಗ ಆಕೆಯೇ ಕೊಲೆ ಮಾಡಿದ್ದಾಳೆ ಎಂಬುದು ತಿಳಿದುಬಂದಿದೆ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)

    ಒಳಉಡುಪು ಬಿಚ್ಚಿಟ್ಟು ಪರೀಕ್ಷೆ ಬರೆಯುವಂತೆ ಪಟ್ಟು: ಪಾಲಕರ ಮುಂದೆ ಕಣ್ಣೀರಿಟ್ಟ ವಿದ್ಯಾರ್ಥಿನಿಯರು

    ಜೈಭೀಮ್​ ವಿವಾದ: ಮದ್ರಾಸ್​ ಹೈಕೋರ್ಟ್​ನಿಂದ​ ಮಹತ್ವದ ತೀರ್ಪು, ಬರ್ತಡೇಗೂ ಮುನ್ನವೇ ಸೂರ್ಯಗೆ ಬಿಗ್​ ರಿಲೀಫ್​

    ಕಿಚ್ಚನ ಕಾಫಿ-ಬನ್ಸ್; ಹೋಟೆಲ್ ಉದ್ಯಮದತ್ತ ಸುದೀಪ್ ಚಿತ್ತ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts