ಬೆಂಗಳೂರು: ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಕೋಟ್ಯಾಂತರ ರೂ. ಬೆಲೆಬಾಳುವ ಅಂಬರ್ಗ್ರೀಸ್ಅನ್ನು ವಶಕ್ಕೆ ಪಡೆದಿದ್ದಾರೆ.
ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ನಿಷೇಧಿತ ಆಂಬರ್ ಗ್ರಿಸ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು ಆರೋಪಿಗಳ ವಿರುದ್ಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂದಹಾಗೆ ಈ ಆರೋಪಿಗಳಿಂದ ಸುಮಾರು 6.5 ಕೆ.ಜಿ. ತೂಕದ ಅಂಬರ್ಗ್ರೀಸ್ ವಶಕ್ಕೆ ಪಡೆಯಲಾಗಿದ್ದು ಪ್ರತಿ ಕೆಜಿಗೆ ಸುಮಾರು 2 ಕೋಟಿ ರೂ. ಬೆಲೆ ಬಾಳುತ್ತದೆ. ಅಂದರೆ ಇವರಿಂದ ಸುಮಾರು 13 ಕೋಟಿ ರೂ. ಮೌಲ್ಯದ ಅಂಬರ್ಗ್ರೀಸ್ಅನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: 3.48 ಕೋಟಿ ಮೌಲ್ಯದ ಅಂಬರ್ಗ್ರೀಸ್ ಅಕ್ರಮ ಮಾರಾಟ ಯತ್ನ: ಆರು ಮಂದಿ ಬಂಧನ
ಏನಿದು ಅಂಬರ್ಗ್ರೀಸ್?!
ಅಂಬರ್ಗ್ರೀಸ್ ಎನ್ನುವ ಪದಾರ್ಥ ಸ್ಪರ್ಮ್ ವೇಲ್ಗಳ ಜೀರ್ಣಾಂಗ ವ್ಯವಸ್ಥೆಯಲ್ಲಿ ಉತ್ಪತ್ತಿಯಾಗುವ ಮಂದ ಬೂದು ಅಥವಾ ಕಪ್ಪು ಬಣ್ಣದ ವಸ್ತುವಾಗಿದೆ. ಹೊಸದಾಗಿ ಸಮುದ್ರ ಸೇರಿದ ಅಂಬರ್ಗ್ರೀಸ್, ಮಲದ ವಾಸನೆ ಹೊಂದಿರುತ್ತದೆ. ಇದು ಸಮಯ ಕಳೆದಂತೆ ಸಿಹಿಯಾದ, ಮಣ್ಣಿನ ಪರಿಮಳವನ್ನು ಪಡೆಯುತ್ತದೆ. ಸಾಮಾನ್ಯವಾಗಿ ಇದರ ಗಂಧವನ್ನು ಐಸೊಪ್ರೊಪಿಲ್ ಆಲ್ಕೋಹಾಲ್ನ ಪರಿಮಳಕ್ಕೆ ಹೋಲಿಸಲಾಗುತ್ತದೆ.
ಇದನ್ನೂ ಓದಿ: 35 ಬಡ ಮೀನುಗಾರರ ಜೀವನವನ್ನೇ ಬದಲಿಸಿದ ಸತ್ತು ಬಿದ್ದಿದ್ದ ತಿಮಿಂಗಿಲ! ಕಾರಣ ಕೇಳಿದ್ರೆ ಅಚ್ಚರಿ ಖಂಡಿತ
ಅಂಬರ್ಗ್ರಿಸ್ಗೆ ಹೆಚ್ಚಿನ ಮೌಲ್ಯ ಬರಲು ಕಾರಣ ಸುಗಂಧ ದ್ರವ್ಯ ತಯಾರಕರು. ಇದು ಸುಗಂಧ ದ್ರವ್ಯಕ್ಕೆ ಹೆಚ್ಚಿನ ಜೀವಿತಾವಧಿ ನೀಡುತ್ತದೆ. ಆದರೆ ಇದನ್ನು ಈಗಿನ ಕಾಲದಲ್ಲಿ ಅಂಬರ್ ಗ್ರೀಸ್ ಬದಲಿಗೆ ಸಿಂಥೆಟಿಕ್ ಆಂಬ್ರಾಕ್ಸೈಡ್ ಎಂಬ ಮನುಷ್ಯ ನಿರ್ಮಿತ ವಸ್ತುವನ್ನು ಬಳಸಲಾಗುತ್ತಿದೆ.