More

    50 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಶಂಕು

    ತ್ಯಾಗರ್ತಿ: ಆದರ್ಶ ಗ್ರಾಮ ಯೋಜನೆಯಡಿ ಹಿರೇಬಿಲಗುಂಜಿ ಗ್ರಾಪಂನ ಹೊಸಂತೆ ಗ್ರಾಮ ಹಾಗೂ ತ್ಯಾಗರ್ತಿ ಗ್ರಾಪಂಗೆ 50 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಗ್ರಾಮೀಣ ಜನರು ಯಾವುದೇ ಮೂಲ ಸೌಕರ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
    ಶುಕ್ರವಾರ ಹೊಸಂತೆ ಹಾಗೂ ತ್ಯಾಗರ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಈಗಾಗಲೇ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಗ್ರಾಮೀಣ ಜನರ ಬದುಕನ್ನು ಬದಲಾಯಿಸಿವೆ. ಜನರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಸಿದ್ಧವಾಗಿದೆ. ಕುಡಿಯುವ ನೀರಿಗೆ ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ಕಾಮಗಾರಿಗಳಿಗೆ ಅನುದಾನ ನೀಡಲಾಗಿದೆ. ಶೀಘ್ರ ಕೆಲಸ ಪ್ರಾರಂಭವಾಗುತ್ತದೆ ಎಂದು ಹೇಳಿದರು.

    ಹಿರೇಬಿಲಗುಂಜಿ ಗ್ರಾಪಂ ಅಧ್ಯಕ್ಷ ನಾಗರಾಜ ಉಪಾಧ್ಯಕ್ಷೆ ಸುಜಾತಾ ಲೋಕೇಶ್, ತ್ಯಾಗರ್ತಿ ಗ್ರಾಪಂ ಅಧ್ಯಕ್ಷೆ ಪ್ರಭಾವತಿ ಲೋಕೇಶ್, ಸದಸ್ಯರಾದ ಎಚ್.ಆರ್.ಪ್ರಶಾಂತ್, ಸುಭಾಷ್, ಗಿರೀಶ್, ಎಚ್.ಶಿವಪ್ಪ, ಮರಾಠಿ ಪರಶುರಾಮ, ಪಿಡಿಒ ಮೋಹನ್, ಶೇಖರಪ್ಪ ಮುಖಂಡರಾದ ಕಲ್ಸೆ ಚಂದ್ರಪ್ಪ, ಎಚ್.ಆರ್.ರಮೇಶ್, ದೇವರಾಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts