More

    ಅಲ್ಲು ಪಾತ್ರದಲ್ಲಿ ಪ್ರಿನ್ಸ್, ರಶ್ಮಿಕಾ ಬದಲು ಸಮಂತಾ! ‘ಪುಷ್ಪ’ವನ್ನು ಐವರು ತಿರಸ್ಕರಿಸಿದ್ದೇಕೆ?

    ಸುಕುಮಾರ್ ಅವರ ನಿರ್ದೇಶಿಸಿದ ಮತ್ತು ಟಾಲಿವುಡ್​ನ ನಟ ಅಲ್ಲು ಅರ್ಜುನ್ ನಟಿಸಿದ ಪುಷ್ಪಚಿತ್ರ ಕರೊನಾ ಸಮಯದಲ್ಲೂ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಖ್ಯಾತಿ ಗಳಿಸಿದೆ. ಈ ಸಿನಿಮಾ ಸುಮಾರು 350 ಕೋಟಿಗೂ ಅಧಿಕ ಗಳಿಕೆ ಮಾಡಿ ಹಲವು ದಾಖಲೆಗಳನ್ನು ಮುರಿದಿದೆ. ಸೌತ್​ನ ನಾಲ್ಕು ರಾಜ್ಯಗಳ ಬಾಕ್ಸಾಫೀಸ್‌ ಅನ್ನು ಪುಷ್ಪಸಿನಿಮಾ ಚಿಂದಿ ಉಡಾಯಿಸಿದೆ. ಇನ್ನು, ಉತ್ತರ ಭಾರತದಲ್ಲಂತೂ ಬರೋಬ್ಬರಿ 100 ಕೋಟಿ ಗಳಿಸಿದೆ ಎನ್ನಲಾಗಿದೆ.
    ಆದರೆ, ಇಷ್ಟು ಯಶಸ್ಸು ಕಂಡ ಸಿನಿಮಾವನ್ನು ಐದು ಸಿನಿ ತಾರೆಯರು ತಿರಸ್ಕರಿಸಿದ್ದಾರೆ ಎಂಬ ಸುದ್ದಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಹೌದು, ಟಾಲಿವುಡ್​ನ ಪ್ರಿನ್ಸ್ ನಟ ಮಹೇಶ್ ಬಾಬು, ದಿಶಾ ಪಾಟ್ನಿ, ಸಮಂತಾ, ನೋರಾ ಫತೇಹಿ, ವಿಜಯ್ ಸೇತುಪತಿ ಅವರು ಈ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದರಂತೆಹಾಗಾದರೆ, ಇಂತಹ ಸೂಪರ್ ಹಿಟ್ ಸಿನಿಮಾವನ್ನು ಈ ನಟರು ತಿರಸ್ಕರಿಸಿದ್ದಾದರು ಯಾಕೆ ಅಂತೀರಾ?
    ಅಂದಹಾಗೆ, 2-3 ವರ್ಷಗಳ ಹಿಂದೆ ಸುಕುಮಾರ್ ಅವರು ಪ್ರಿನ್ಸ್ ಮಹೇಶ್ ಬಾಬು ಅವರಿಗೆ ಒಂದು ಸಿನಿಮಾ ಕಥೆ ಹೇಳುತ್ತಿದ್ದಾರೆಂದು ಸುದ್ದಿಗಳು ಕೇಳಿಬಂದವು. ನಂತರ, ಇವರಿಬ್ಬರ ನಡುವೆ ಮಾತುಕತೆ ನಡೆದಿದ್ದರೂ, ಮಹೇಶ್​ಗೆ ಕಥೆ ಒಕೆ ಆಗಿರಲಿಲ್ಲವಂತೆ. ಇದೀಗ, ‘ಪುಷ್ಪಕಥೆಯನ್ನೇ ಸುಕುಮಾರ್ ಅಂದು ಮಹೇಶ್ ಬಾಬುಗೆ ಹೇಳಿದ್ದು, ಮಹೇಶ್ ಅವರು ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ನಟಿಸುವುದಿಲ್ಲವೆಂದು ತಿರಸ್ಕರಿಸಿದ್ದರಂತೆ.
    ಅಂದು ಮಹೇಶ್ ಬಾಬು ಬಿಟ್ಟ ಕಥೆಗೆ ನಟ ಅಲ್ಲು ಅರ್ಜುನ್‌ ನಾಯಕನಾಗಿ ತೆರೆ ಮೇಲೆ ಸಖತ್ತಾಗಿ ಮಿಂಚಿದ್ದಾರೆ. ಇನ್ನು, ಸುಕುಮಾರ್ ನಿರ್ದೇಶಿಸಿದ ರಂಗಸ್ಥಳಂಸಿನಿಮಾದಲ್ಲಿ ಸಮಂತಾ ಉತ್ತಮವಾಗಿ ನಟಿಸಿದ್ದು, ‘ಪುಷ್ಪಚಿತ್ರದಲ್ಲಿ ರಶ್ಮಿಕಾ ಪಾತ್ರಕ್ಕೆ ಅವರಿಗೆ ಅವಕಾಶ ನೀಡಿದ್ದರಂತೆ ಸುಕುಮಾರ್. ಆದರೆ, ಸಮಂತಾ ಕಾಲ್ ಶಿಟ್ ಮತ್ತು ಹಲವು ಕಾರಣಗಳಿಂದ ಚಿತ್ರದಲ್ಲಿ ನಟಿಸಲು ಸಾಧ್ಯವಾಗಿಲ್ಲವಂತೆ. ಹೀಗಿದ್ದರೂ, ಅಲ್ಲು ಅವರ ಒತ್ತಾಯದ ಮೇರೆಗೆ, ಕೊನೆಗೂ ಸಿನಿಮಾದ ಹೂ ಅಂಟಾವಾ ಮಾವಐಟಂ ಹಾಡಿಗೆ ಹೆಜ್ಜೆ ಹಾಕಿ ಜಗತ್ ಪ್ರಸಿದ್ಧಿಯಾಗಿದ್ದಾರೆ ಎಂದೇ ಹೇಳಬೇಕು.
    ಮತ್ತೊಂದೆಡೆ, ಇದೇ ಹೂ ಅಂಟಾವಾ ಮಾವಾಐಟಂ ಹಾಡಿಗೆ ಮೊದಲು ಬಾಲಿವುಡ್​ನ ಹಾಟ್​ ನಟಿ ದಿಶಾ ಪಾಟ್ನಿ ಅವರನ್ನು ಸಂಪರ್ಕಿಸಲಾಗಿತ್ತಂತೆ. ಆದರೆ, ಸಂಭಾವನೆಯ ವಿಚಾರವಾಗಿ ಈ ಬಾಲಿವುಡ್ ಬ್ಯೂಟಿ ಐಟಂ ಹಾಡಿಗೆ ಹೆಜ್ಜೆ ಹಾಕಲು ನಿರಾಕರಿಸಿದರಂತೆ. ನಂತರ, ಇದೇ ಹಾಡಿಗೆ ಬಾಲಿವುಡ್‌ನ ಐಟಂ ಡ್ಯಾನ್ಸರ್ ನೋರಾ ಫತೇಹಿ ಅವರನ್ನು ಕೇಳಿದಾಗ ಅವರು ಕೂಡ ಸಂಭಾವನೆ ವಿಚಾರವಾಗಿ ನೋ ಎಂದಿದ್ದರಂತೆ.
    ಕೊನೆದಾಗಿ, ನಟ ವಿಜಯ್ ಸೇತುಪತಿ ಅವರನ್ನು ಪುಷ್ಪಸಿನಿಮಾದಲ್ಲಿನ ನಟ ಫಹಾದ್ ಫಾಸಿಲ್ ನಟಿಸಿದ ಖಳನಾಯಕನ ಪಾತ್ರಕ್ಕೆ ಆಯ್ಕೆ ಮಾಡಿದಾಗ, ವಿಜಯ್ ಸೇತುಪತಿ ಅವರು ತಾವು ಅಲ್ಲು ಅರ್ಜುನ್ ಅವರ ಪಾತ್ರ ಅಂದರೆ ನಾಯಕ ನಟನ ಪಾತ್ರ ಕೊಟ್ಟರೆ ನಟಿಸುವುದಾಗಿ ತಿಳಿಸಿದ್ದರಂತೆ. ಆದರೆ, ಅವರಿಗಿಂತ ಮುಂಚೆ ಅಲ್ಲು ಅರ್ಜುನ್‌ ಪುಷ್ಪರಾಜ್ಪಾತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ವಿಜಯ್ ಕೂಡ ಚಿತ್ರವನ್ನು ಕೈಬಿಟ್ಟರಂತೆ. ಅದೇನೇ ಇರಲಿ, ಬಹುಶಃ ಯಾವುದೋ ಒಂದು ಮೂಲೆಯಲ್ಲಿ ಇಂತಹ ಸೂಪರ್ ಹಿಟ್ ಸಿನಿಮಾವನ್ನು ರಿಜೆಕ್ಟ್ ಮಾಡಿದ ಈ ಐದೂ ನಟರಿಗೆ ಚುರು ಬೇಸರ ಇದ್ದೇ ಇರಬಹುದು

    ಹಿರಿಯ ನಟನ ಜೊತೆಗೆ ‘ನಮಿತಾ ಡೇಟಿಂಗ್’? ನಟಿಯ 2ನೇ ಪತಿ ಕೊಟ್ಟ ಸ್ಪಷ್ಟನೇ ಏನು?

    ಸೌತ್ ನಟನೊಂದಿಗೆ ಅದೃಷ್ಟ ಪರೀಕ್ಷೆಗಿಳಿಯಲಿರುವ ಜಾಹ್ನವಿ ಕಪೂರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts