More

    45 ಸಿಬ್ಬಂದಿ ವರ್ಗಾವಣೆ, ಇಬ್ಬರ ವಿರುದ್ಧ ದೂರು

    ಹುಬ್ಬಳ್ಳಿ: ಸಾರಿಗೆ ನೌಕರರ ಮಷ್ಕರ ಭಾನುವಾರ ಐದನೇ ದಿನ ಪೂರೈಸಿದೆ. ನೌಕರರ ಪಟ್ಟು ಬಿಗಿಯಾಗುತ್ತಿದ್ದಂತೆ ಅಧಿಕಾರಿಗಳು ಗರಂ ಆಗಿದ್ದು, ವರ್ಗಾವಣೆ ಅಸ್ತ್ರ ಬಳಸಿದ್ದಾರೆ. ಇದೇ ವೇಳೆ, ಸಾರಿಗೆ ಬಸ್ ಓಡಾಟಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಹುಬ್ಬಳ್ಳಿ ಗೋಕುಲ ರಸ್ತೆ ಠಾಣೆ ಹಾಗೂ ನವಲಗುಂದ ಪೊಲೀಸ್ ಠಾಣೆಯಲ್ಲಿ ತಲಾ ಒಂದು ದೂರು ದಾಖಲಾಗಿದೆ.

    ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ ಭಾನುವಾರ ಒಟ್ಟು 26 ಬಸ್​ಗಳನ್ನು ರಸ್ತೆಗಿಳಿಸಲಾಯಿತು. ಹುಬ್ಬಳ್ಳಿ ಗ್ರಾಮಾಂತರ 1ನೇ ಘಟಕದಿಂದ 11, 2ನೇ ಘಟಕದಿಂದ 10, 3ನೇ ಘಟಕದಿಂದ 3, ಕಲಘಟಗಿ ಮತ್ತು ನವಲಗುಂದ ಘಟಕದಿಂದ ತಲಾ ಒಂದು ಬಸ್ ಸಂಚರಿಸಿವೆ. ಈ ಬಸ್​ಗಳನ್ನು ಬಳಸಿಕೊಂಡು ಹುಬ್ಬಳ್ಳಿಯಿಂದ ಗದಗಕ್ಕೆ 26 ಸರತಿ , ಬೆಳಗಾವಿಗೆ 4, ಬಾಗಲಕೋಟೆಗೆ 6, ಕಲಘಟಗಿಗೆ 6, ಇತರ ಸ್ಥಳಗಳಿಗೆ 8 ಸರತಿಗಳನ್ನು ಕಾರ್ಯಾಚರಣೆ ಮಾಡಲಾಗಿದೆ. ನಲಗುಂದದಿಂದ ರೋಣಕ್ಕೆ ಒಂದು ಹಾಗೂ ಕಲಘಟಗಿಯಿಂದ ಹುಬ್ಬಳ್ಳಿಗೆ ಎರಡು ಸರತಿಗಳಲ್ಲಿ ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ (ಡಿಸಿ) ಎಚ್. ರಾಮನಗೌಡರ ತಿಳಿಸಿದ್ದಾರೆ.

    ಹುಬ್ಬಳ್ಳಿ ಗ್ರಾಮಾಂತರ ವಿಭಾಗದ 17 ಸಿಬ್ಬಂದಿಯನ್ನು ಆಡಳಿತಾತ್ಮಕ ಕಾರಣಗಳ ಮೇಲೆ ಬೇರೆ ಬೇರೆ ವಿಭಾಗಗಳಿಗೆ ವರ್ಗಾಯಿಸಲಾಗಿದೆ. ಚಿಕ್ಕೋಡಿ ವಿಭಾಗಕ್ಕೆ 6 ಸಿಬ್ಬಂದಿಯನ್ನು, ಬೆಳಗಾವಿ ವಿಭಾಗಕ್ಕೆ 4, ಶಿರಸಿ ವಿಭಾಗಕ್ಕೆ 4 ಮತ್ತು ಹಾವೇರಿ ವಿಭಾಗಕ್ಕೆ ಮೂವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಡಿಪೋಗಳತ್ತ ಬರುತ್ತಿರುವ ಸಿಬ್ಬಂದಿ: ಮುಷ್ಕರದ ಆರಂಭದ ದಿನದಿಂದ ಸಿಬ್ಬಂದಿ ಬಸ್ ಡಿಪೋಗಳತ್ತ ಸುಳಿದಿರಲಿಲ್ಲ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಮೇಲಧಿಕಾರಿಗಳ ಸಂಪರ್ಕಕ್ಕೂ ಸಿಗುತ್ತಿರಲಿಲ್ಲ. ಇದೀಗ ಪರಿಸ್ಥಿತಿ ಬದಲಾಗಿದೆ. ಎಲ್ಲ ಘಟಕಗಳ ಅನೇಕ ಸಿಬ್ಬಂದಿ ತಾವಾಗಿಯೇ ಮೇಲಧಿಕಾರಿಗಳನ್ನು ಸಂರ್ಪಸಿ ಕರ್ತವ್ಯಕ್ಕೆ ಬರುವುದಾಗಿ ತಿಳಿಸುತ್ತಿದ್ದಾರೆ. ಸೋಮವಾರ ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆ ಬಸ್​ಗಳನ್ನು ರಸ್ತೆಗಿಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಡಿಸಿ ಹೇಳಿದ್ದಾರೆ.

    ಖಾಸಗಿ ಸೇವೆ: ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಿಂದ ಭಾನುವಾರ ಕೂಡ ಖಾಸಗಿ ಬಸ್, ಟೆಂಪೋ, ಕ್ರೂಸರ್ ಸೇರಿದಂತೆ ಖಾಸಗಿ ವಾಹನಗಳು ವಿವಿಧ ಜಿಲ್ಲಾ ಮತ್ತು ತಾಲೂಕು ಕೇಂದ್ರ, ಪ್ರಮುಖ ಹಳ್ಳಿಗಳಿಗೆ ಸೇವೆ ನೀಡಿದವು. ಆದರೂ, ಬೇರೆ ಬೇರೆ ಕಡೆ ಸಮಯಕ್ಕೆ ಸರಿಯಾಗಿ ಬಸ್ ಸಿಗದೇ ಸಾರ್ವಜನಿಕರು ಒಂದಿಷ್ಟು ತೊಂದರೆ ಅನುಭವಿಸಬೇಕಾಯಿತು.

    ಕರ್ತವ್ಯಕ್ಕೆ ಅಡ್ಡಿ: ಮುಷ್ಕರದ ಅವಧಿಯಲ್ಲಿ ಕರ್ತವ್ಯ ನಿರತ ಸಾರಿಗೆ ಸಿಬ್ಬಂದಿಯ ಕೆಲಸಕ್ಕೆ ಅಡ್ಡಿಪಡಿಸಿದ ಘಟನೆಗಳು ಹುಬ್ಬಳ್ಳಿ ಹಾಗೂ ನವಲಗುಂದದಲ್ಲಿ ನಡೆದಿವೆ.ಹುಬ್ಬಳ್ಳಿ ಗೋಕುಲ ರಸ್ತೆಯಲ್ಲಿ ಗುರುವಾರ ಕೆಎ 42 ಎಫ್ 1501 ಸಂಖ್ಯೆಯ ಬಸ್ ಡಿಪೋದಿಂದ ಹಳೆ ಬಸ್ ನಿಲ್ದಾಣಕ್ಕೆ ಹೋಗುವಾಗ ಸಿಬ್ಬಂದಿ ವಸತಿ ಗೃಹಗಳ ಹತ್ತಿರ ಕೆಲವರು ಸ್ವಲ್ಪ ಹೊತ್ತು ಬಸ್ ತಡೆದು ಅಡ್ಡಿಪಡಿಸಿದ ಘಟನೆ ನಡೆದಿತ್ತು. ಕೆಎ 63 ಎಫ್​ಎಫ್ 171 ಬಸ್ ಹುಬ್ಬಳ್ಳಿಯಿಂದ ಬಾಗಲಕೋಟೆಗೆ ತೆರಳುತ್ತಿದ್ದಾಗ ನವಲಗುಂದ ಬಸ್ ನಿಲ್ದಾಣದಲ್ಲಿ ಶಿವಾನಂದ ಎಂಬುವವರು ಚಾಲಕರ ಕರ್ತವ್ಯಕ್ಕೆ ಅಡ್ಡಿಪಡಿಸಿ, ನಿಂದಿಸಿ, ಬಸ್​ನ ಕೀಲಿ ಕಿತ್ತುಕೊಂಡು ಹೋಗಿದ್ದರು. ಎರಡೂ ಘಟನೆಗಳಿಗೆ ಸಂಬಂಧಪಟ್ಟಂತೆ ಪೊಲೀಸ್ ದೂರು ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts