ಯಲ್ಲಾಪುರ: ಒಂದೇ ಕುಟುಂಬದ ಮಹಿಳೆಯರು ಮೃತಪಟ್ಟ ದುರ್ಘಟನೆ ಜಕ್ಕೊಳ್ಳಿ ಸಮೀಪದ ದೊಡ್ಡಬೇಣ ಎಂಬಲ್ಲಿ ನಡೆದಿದೆ. ಸರಿತಾ ಆದಿತ್ಯ ನಾಯ್ಕ (26), ಶ್ವೇತಾ ದಿನೇಶ ನಾಯ್ಕ(30), ಗೌರಿ ಶಿವಾ ನಾಯ್ಕ್(55) ಮೃತರು.
ಮೊದಲು ಸರಿತಾ ಅವರು ತೋಟಕ್ಕೆ ನೀರು ತರಲು ಹೋಗಿದ್ದರು. ಆದರೆ ಕಾಲುಜಾರಿ ಬಾವಿಯಲ್ಲಿ ಬಿದ್ದಿದ್ದಾರೆ. ಸರಿತಾರನ್ನು ರಕ್ಷಿಸಲು ಅವರ ಅತ್ತಿಗೆ ಶ್ವೇತಾ ಬಾವಿಗೆ ಧುಮುಕಿದ್ದಾರೆ. ಆದರೆ ಇಬ್ಬರೂ ನೀರಿನಲ್ಲಿ ಈಜಲಾಗದೆ ಮುಳುಗಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ವಿಷಾನಿಲ ದುರಂತ ಸಂಭವಿಸಿದ ಬಹುರಾಷ್ಟ್ರೀಯ ಕಂಪನಿ ಎಲ್ಜಿ ಪಾಲಿಮರ್ಸ್ ಕಾರ್ಖಾನೆ ಇತಿಹಾಸ ಗೊತ್ತಾ?
ಮಗಳು ಹಾಗೂ ಹಿರಿಯ ಸೊಸೆ ಇಬ್ಬರೂ ಮೃತಪಟ್ಟ ಸುದ್ದಿಕೇಳುತ್ತಿದ್ದಂತೆ ಆಘಾತಕ್ಕೊಳಗಾದ ಗೌರಿ ನಾಯ್ಕ್ ತೀವ್ರ ಅಸ್ವಸ್ಥರಾಗಿ ಕುಸಿದುಬಿದ್ದರು. ಆಸ್ಪತ್ರೆಗೆ ಸಾಗಿಸುವಾಗ ಅವರೂ ಸಹ ಸಾವನ್ನಪ್ಪಿದ್ದಾರೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಉಗ್ರ ರಿಯಾಜ್ ನಾಯ್ಕೂ ಎನ್ಕೌಂಟರ್ಗೆ ರಕ್ಷಣಾ ಪಡೆಗಳ ಸಹಾಯಕ್ಕೆ ನಿಂತಿದ್ದು ಇನ್ನೊಂದು ಉಗ್ರಸಂಘಟನೆ…!