ಬೆಳ್ತಂಗಡಿ: ತಾಲೂಕಿನ ಸಿಯೋನ್ ಆನಾಥಾಶ್ರಮದಲ್ಲಿ ಕರೊನಾ ಮಹಾಸ್ಫೋಟಗೊಂಡಿದೆ. ಆಶ್ರಮದಲ್ಲಿ 270 ಮಂದಿ ಇದ್ದರೆ ಅದರಲ್ಲಿ 210 ಮಂದಿಗೆ ಸೋಂಕು ದೃಢವಾಗಿದೆ.
ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಂಡಿಬಾಗಿಲುನಲ್ಲಿ ಸಿಯೋನ್ ಅನಾಥಾಶ್ರಮವಿದೆ. ಈ ಆಶ್ರಮದಲ್ಲಿ ಕೆಲವು ದಿನಗಳ ಹಿಂದೆ ಕೆಲವರಲ್ಲಿ ಸೋಂಕು ದೃಢವಾಗಿತ್ತು. ಆ ಹಿನ್ನೆಲೆಯಲ್ಲಿ ಶನಿವಾರದಂದು ಆಶ್ರಮದ ಪ್ರತಿಯೊಬ್ಬರನ್ನು ರ್ಯಾಂಡಮ್ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ 210 ಮಂದಿಗೆ ಸೋಂಕು ಇರುವುದು ಟೆಸ್ಟ್ನಿಂದಾಗಿ ತಿಳಿದುಬಂದಿದೆ.
ಆಶ್ರಮದಲ್ಲಿರುವ ಬಹುತೇಕರು ವೃದ್ಧರು ಮತ್ತು ಮನೋರೋಗಿಗಳಾಗಿದ್ದಾರೆ. ಆಶ್ರಮದಲ್ಲಿರುವ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ಗೆ ಶಿಫ್ಟ್ ಮಾಡಲು ಶಾಸಕ ಹರೀಶ್ ಪೂಂಜಾ ವ್ಯವಸ್ಥೆ ಮಾಡಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ದ ರಜತಾದ್ರಿ ವಸತಿ ಗೃಹವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಮಾಡಲಾಗಿದ್ದು, ಅಲ್ಲಿಗೆ ಸೋಂಕಿತರನ್ನು ಶಿಫ್ಟ್ ಮಾಡಿರುವುದಾಗಿ ತಿಳಿಸಲಾಗಿದೆ.
ಜಿಲ್ಲೆಯಲ್ಲಿ ಲಾಕ್ಡೌನ್ ಇದೆ ಎಂದು ಬೇರೆ ಜಿಲ್ಲೆಯಿಂದ ಅಕ್ರಮವಾಗಿ ಮದ್ಯ ಸಾಗಾಣಿಕೆ! ಸಿಕ್ಕಿಬಿದ್ದ ಕಳ್ಳರು