ನವದೆಹಲಿ: ಮಾರಕ ಕರೊನಾ ವೈರಸ್ ಸೋಂಕು ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯರು ಹಾಗೂ ನರ್ಸ್ಗಳ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ಮ,ರಿಸಿದರು.
ಕರೊನಾ ವೈರಸ್ ಸೋಂಕು ವಿರುದ್ಧ ಹೋರಾಟ ಆರಂಭಿಸಿರುವ ಬೆಂಗಳೂರಿನ ವೈದ್ಯ ನಿರಂಜನ್ ಸುಧಾಕರ್ ಅವರ ಸೇವೆಯನ್ನು ಈ ವೇಳೆ ಪ್ರಧಾನಿ ಮೋದಿ ಅವರು ಶ್ಲಾಘಿಸಿದರು. 2020ನೇ ವರ್ಷವನ್ನು ವೈದ್ಯರು ಹಾಗೂ ನರ್ಸ್ಗಳಿಗೆ ಮೀಸಲು ಇಡುವುದಾಗಿ ಅವರು ತಿಳಿಸಿದರು.
ಡೆಲವರಿ ಹುಡುಗರು ಹಾಗೂ ಬ್ಯಾಂಕ್ ಸಿಬ್ಬಂದಿ ಸೇವೆ ಕೂಡ ಮರೆಯುವಂತಿಲ್ಲ. ಒಟ್ಟಾರೆ ಎಲ್ಲರೂ ಕರೊನಾ ವಿರುದ್ಧ ಸಮರಕ್ಕೆ ಮುಂದಾಗಿದ್ದೀರಿ. ಕರೊನಾ ವೈರಸ್ ಸೋಂಕಿನ ಲಕ್ಷಣ ಗೋಚರಿಸುತ್ತಿದ್ದಂತೆ ಮನೆಗಳಲ್ಲಿ ಕ್ವಾರಂಟೈನ್ ಆಗಿ. ಮಾಹಿತಿಯನ್ನು ಸಮೀಪದ ವೈದ್ಯರಿಗೆ ತಿಳಿಸಿದೆ ಎಂದು ಅವರು ಮನವಿ ಮಾಡಿದರು.