ಶ್ರೀನಗರ: 2019ರ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ನಡೆದ ದಾಳಿಯ ಮತ್ತೋರ್ವ ಪ್ರಮುಖ ಆರೋಪಿಯನ್ನು ಇಂದು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ಅಂದು ಪುಲ್ವಾಮಾದಲ್ಲಿ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದ್ದ ಐಇಡಿ ದಾಳಿಯಲ್ಲಿ ಸಿಆರ್ಪಿಎಫ್ನ 40 ಯೋಧರು ಹುತಾತ್ಮರಾಗಿದ್ದರು.
ಈ ದಾಳಿಗೆ ಸಂಬಂಧಪಟ್ಟಂತೆ ಇದುವರೆಗೆ ಒಟ್ಟು ಐವರು ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ದಾಳಿಯ ಪ್ರಮುಖ ಸಂಚುಕೋರ ಮೊಹಮದ್ ಉಮರ್ ಫಾರೂಕ್ಗೆ ಸಹಾಯ ಮಾಡಿದ ಆರೋಪದಡಿ ಆರನೇ ಆರೋಪಿ ಮೊಹಮದ್ ಇಕ್ಬಾಲ್ ರಾಥರ್ (25)ಎಂಬಾತನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ.
ಈತ ಜಮ್ಮುಕಾಶ್ಮೀರದ ಬುಡ್ಗಮ್ನ ಚರಾರ್-ಎ-ಶರೀಫ್ನಲ್ಲಿರುವ ಫುಟ್ಲಿಪುರ ನಿವಾಸಿಯಾಗಿದ್ದು, ಪುಲ್ವಾಮಾ ದಾಳಿಯಲ್ಲಿ ಈತನ ಪಾತ್ರವೂ ಇರುವುದು ಸಾಬೀತಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ಕರೊನಾ ‘ಸಾವಿರ’ದ ಓಟ; ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆ ಕಡಿಮೆ
ಈತ ಜೈಷ್ ಎ ಮೊಹಮ್ಮದ್ ಉಗ್ರಸಂಘಟನೆಯ ಇನ್ನೊಂದು ದಾಳಿಗೆ ಸಂಬಂಧಪಟ್ಟ ಪ್ರಕರಣದಡಿ 2018ರ ಸೆಪ್ಟೆಂಬರ್ನಿಂದಲೂ ನ್ಯಾಯಾಂಗ ಬಂಧನದಲ್ಲಿಯೇ ಇದ್ದ. ಜೈಲು ಅಧಿಕಾರಿಗಳು ಅವನನ್ನು ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಏಳು ದಿನಗಳ ಕಾಲ ಆತನನ್ನು ಎನ್ಐಎ ಕಸ್ಟಡಿಗೆ ನೀಡಿದೆ. (ಏಜೆನ್ಸೀಸ್)
ಅನ್ಲಾಕ್-2ಹಂತದಲ್ಲಿ ಪ್ರವಾಸೋದ್ಯಮಕ್ಕೆ ಒತ್ತು; ಜು.6ರಿಂದ ಐತಿಹಾಸಿಕ ಸ್ಮಾರಕ ತಾಣಗಳು ಓಪನ್