ಬೆಂಗಳೂರು: ರಾಜ್ಯದಲ್ಲಿ ಕರೊನಾ ವೈರಸ್ ನಾಗಾಲೋಟ ಮಿತಿಮಿರಿದೆ. ಕಳೆದ 24ಗಂಟೆಯಲ್ಲಿ 1502 ಹೊಸ ಸೋಂಕಿತರು ಪತ್ತೆಯಾಗಿದ್ದು, ಬೆಂಗಳೂರು ನಗರದಲ್ಲಿ ಇಂದು ಒಂದೇ ದಿನ 883 ಮಂದಿಯಲ್ಲಿ ಕೊವಿಡ್-19 ದೃಢಪಟ್ಟಿದೆ.
ಕಳೆದ 24ಗಂಟೆಯಲ್ಲಿ ಕರೊನಾ ಸೋಂಕಿನಿಂದ 19 ಮಂದಿ ಸಾವನ್ನಪ್ಪಿದ್ದು, 271 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯದಲ್ಲಿ ಒಟ್ಟು ಕರೊನಾ ಸೋಂಕಿತರ ಸಂಖ್ಯೆ 18,016ಕ್ಕೆ ಏರಿದ್ದು, ಡಿಸ್ಚಾರ್ಜ್ ಆದವರು ಒಟ್ಟು 8383 ಜನರು. ಮೃತಪಟ್ಟವರು 272 ಜನರು ಹಾಗೂ ಒಟ್ಟು ಸಕ್ರಿಯ ಪ್ರಕರಣಗಳು 9406 ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇಂದು ಯಾವ್ಯಾವ ಜಿಲ್ಲೆಗಳಲ್ಲಿ ಎಷ್ಟು ಸೋಂಕಿತರು ಪತ್ತೆಯಾಗಿದ್ದಾರೆ ಎಂಬ ಪಟ್ಟಿ ಇಲ್ಲಿದೆ:
ಬೆಂಗಳೂರು ನಗರ-889
ದಕ್ಷಿಣ ಕನ್ನಡ-90
ಮೈಸೂರು-68
ಬಳ್ಳಾರಿ-65
ಧಾರವಾಡ-47
ವಿಜಯಪುರ-39
ರಾಮನಗರ-39
ಕಲಬುರಗಿ-38
ಬೀದರ್-32
ತುಮಕೂರು-26
ಶಿವಮೊಗ್ಗ-23
ಮಂಡ್ಯ-19
ಉತ್ತರ ಕನ್ನಡ-17
ಹಾಸನ-15
ಉಡುಪಿ-24
ಕೋಲಾರ-12
ರಾಯಚೂರು-11
ಬಾಗಲಕೋಟೆ-10
ದಾವಣಗೆರೆ-8
ಯಾದಗಿರಿ=7
ಬೆಳಗಾವಿ-7
ಕೊಡಗು-6
ಬೆಂಗಳೂರು ಗ್ರಾಮಾಂತರ-5
ಹಾವೇರಿ-4
ಕೊಪ್ಪಳ-4
ಚಿತ್ರದುರ್ಗ-3
ಗದಗ-2
ಚಿಕ್ಕಬಳ್ಳಾಪುರ-1
ಚಿಕ್ಕಮಗಳೂರು-1
ಸದಾ ಕುಡಿದು ಬಂದು ಹಿಂಸಿಸುತ್ತಿದ್ದ ಪತಿಗೆ ಲಟ್ಟಣಿಗೆಯಲ್ಲೇ ಹೊಡೆದು ಕೊಂದ ಪತ್ನಿ