ಅಂಬಾಲ: ನೋಡಲು ನೇಪಾಳಿಗರಂತೆ ಕಂಡಿದ್ದಕ್ಕೆ ಚಂಡೀಗಢದ ಅಧಿಕಾರಿಗಳು ನಮಗೆ ಪಾಸ್ಪೋರ್ಟ್ ನೀಡಲು ನಿರಾಕರಿಸಿದರು ಎಂದು ಹರಿಯಾಣದ ಸಹೋದರಿಯರಿಬ್ಬರು ಆರೋಪಿಸಿದ್ದಾರೆ.
ಚಂಡೀಗಢದ ಪಾಸ್ಪೋರ್ಟ್ ಕಚೇರಿಗೆ ತೆರಳಿದಾಗ ಅಧಿಕಾರಿಗಳು ನಮ್ಮ ಮುಖವನ್ನು ದಿಟ್ಟಿಸಿ ನೋಡಿದರು. ಬಳಿಕ ನಮ್ಮನ್ನು ನೇಪಾಳಿಗಳೆಂದು, ರಾಷ್ಟ್ರೀಯತೆ ಸಾಬೀತು ಮಾಡುವಂತೆ ಕೇಳಿದರು. ಈ ವಿಚಾರವನ್ನು ಹರಿಯಾಣದ ಸಚಿವ ಅನಿಲ್ ವಿಜ್ ಬಳಿ ತೆಗೆದುಕೊಂಡು ಹೋದ ಬಳಿಕವಷ್ಟೇ ನಮ್ಮ ಪಾಸ್ಪೋರ್ಟ್ ಕೆಲಸವನ್ನು ಆರಂಭಿಸಿದರು ಎಂದು ಸಹೋದರಿಯೊಬ್ಬರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅಂಬಾಲದ ಉಪ ಪೊಲೀಸ್ ಆಯುಕ್ತ ಅಶೋಕ್ ಶರ್ಮಾ, ಇಬ್ಬರು ಸಹೋದರಿಯರ ದಾಖಲೆಗಳ ಮೇಲೆ ಅರ್ಜಿದಾರರು ನೋಡಲು “ನೇಪಾಳಿಗಳಂತೆ ಕಾಣುತ್ತಾರೆ” ಎಂದು ಬರೆದು ಪಾಸ್ಪೋರ್ಟ್ ಅಧಿಕಾರಿಗಳು ಕಳುಹಿಸಿದ್ದರು. ಈ ವಿಚಾರ ನನ್ನ ಗಮನಕ್ಕೆ ಬಂದ ತಕ್ಷಣ ವಿಚಾರಿಸಿದ್ದು, ಸಮಸ್ಯೆ ಬಗೆಹರಿದಿದೆ. ಆದಷ್ಟು ಬೇಗ ಅವರಿಗೆ ಪಾಸ್ಪೋರ್ಟ್ ದೊರೆಯಲಿದೆ. ಅಲ್ಲದೆ, ಪ್ರಕರಣವನ್ನು ತನಿಖೆಗೂ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)