More

    ಮೇ 1ರಿಂದ ಪ್ರತಿಷ್ಠಿತ ಯರವ ಕ್ರೀಡೋತ್ಸವ

    ಮಡಿಕೇರಿ: ಗೋಣಿಕೊಪ್ಪದ ಯರವ ಕುಟುಂಬದ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ಪ್ರತಿಷ್ಠಿತ ಯರವ ಕ್ರೀಡೋತ್ಸವಕ್ಕೆ ಅಂತಿಮ ಸಿದ್ಧತೆ ನಡೆಯುತ್ತಿದ್ದು ಈಗಾಗಲೇ ಜಿಲ್ಲೆಯ 65 ಯರವ ಕುಟುಂಬಗಳು ತಮ್ಮ ಹೆಸರು ನೋಂದಾಯಿಸಿಕೊಂಡಿವೆ.


    ಮೇ 1ರಿಂದ 5 ರವರೆಗೆ ತಿತಿಮತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದ್ದು ಮೈದಾನವನ್ನು ಸಜ್ಜುಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಕ್ರಿಕೆಟ್ ಪಂದ್ಯಾಟದೊಂದಿಗೆ ಮಹಿಳೆಯರಿಗಾಗಿ ಹಗ್ಗಜಗ್ಗಾಟ ಪಂದ್ಯಾವಳಿಯು ಆಯೋಜನೆಗೊಂಡಿದೆ. ಜನಾಂಗದ ಆಚಾರ, ವಿಚಾರ ಪದ್ಧತಿ, ಪರಂಪರೆ ಉಳಿಸುವ ನಿಟ್ಟಿನಲ್ಲಿ ಹಾಗೂ ಜನಾಂಗವನ್ನು ಒಂದೆಡೆ ಸೇರಿಸುವ ಪ್ರಯತ್ನವಾಗಿ ಕಳೆದ 11 ವರ್ಷಗಳಿಂದ ಯರವ ಸಮುದಾಯವು ಪ್ರಯತ್ನ ನಡೆಸುತ್ತಿದೆ.


    ಈ ಬಾರಿ 12ನೇ ವರ್ಷದ ಕ್ರಿಕೆಟ್ ಪಂದ್ಯಾಟವು ತಿರುಮುಂಡೆಲಾತ್ತಿಲಾ ಮನೆತನದ ಹೆಸರಿನಲ್ಲಿ ನಡೆಯಲಿದೆ. ಜಿಲ್ಲೆಯ ವಿವಿಧ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಯರವ ಸಮುದಾಯದ ತಂಡಗಳು ಭಾಗವಹಿಸಲಿವೆ.


    ಶಾಸಕರಿಗೆ ಆಹ್ವಾನ: ಕ್ರೀಡೋತ್ಸವದ ಉದ್ಘಾಟನೆಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರಿಗೆ ಸಮಿತಿಯಿಂದ ಆಮಂತ್ರಣ ನೀಡಲಾಯಿತು.


    ಈ ವೇಳೆ ಮಾತನಾಡಿದ ಶಾಸಕ ಪೊನ್ನಣ್ಣ, ಯರವ ಸಮುದಾಯವು 11 ವರ್ಷಗಳಿಂದ ಸಮುದಾಯವನ್ನು ಒಂದೆಡೆ ಸೇರುವ ಪ್ರಯತ್ನವಾಗಿ ಕ್ರೀಡಾಕೂಟ ಆಯೋಜಿಸುತ್ತ ಬಂದಿದೆ. ಯರವ ಸಮುದಾಯವು ಸಮಾಜಕ್ಕೆ ತನ್ನದೆ ಆದ ಕೊಡುಗೆ ನೀಡಿದೆ. ಕ್ರೀಡಾಕೂಟದ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ ಎಂದರು.

    ಯರವ ಸಮಾಜದ ಅಧ್ಯಕ್ಷ ಪಿ.ಕೆ.ಸಿದ್ದಪ್ಪ ಅಧ್ಯಕ್ಷತೆಯಲ್ಲಿ ಗುರುವಾರ ಶಾಸಕರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಯರವ ಸಮಾಜದ ಕಾರ್ಯದರ್ಶಿ ಪ್ರಸನ್ನ, ವೈ.ಕೆ.ಮಲ್ಲಪ್ಪ, ಪಿ.ಎಂ.ನಿತೀನ್, ಪಿ.ಎ. ದಿನೇಶ್, ಪಿ.ಎಂ.ಗಣೇಶ್ ಹಾಗೂ ಪಿ.ಎಸ್.ಶಶಿ ಸೇರಿದಂತೆ ಇನ್ನಿತರರು ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts