ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿದ್ದ 18 ಡಿವೈಎಸ್ಪಿ ಮತ್ತು 100 ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಇಲಾಖೆ ಸೋಮವಾರ ಆದೇಶಿಸಿದೆ.
ಡಿವೈಎಸ್ಪಿಗಳಾದ ಗೀತಾ ಬೇನಹಾಳ-ಕೊಪ್ಪಳ ಉಪವಿಭಾಗ, ಎಂ.ಜೆ. ಪೃಥ್ವಿ -ಶೇಷಾದ್ರಿಪುರ ಉಪವಿಭಾಗ, ಟಿ.ಎಂ. ಶಿವಕುಮಾರ್-ಸುಬ್ರಹ್ಮಣ್ಯಪುರ ಉಪವಿಭಾಗ, ಎಂ.ಎನ್. ಕರಿಬಸವನಗೌಡ – ಮೈಕೋ ಲೇಔಟ್ ಉಪವಿಭಾಗ, ಸುಧೀರ್ ಎಂ. ಹೆಗಡೆ- ಮಡಿವಾಳ ಉಪವಿಭಾಗ, ಎಂ. ಜಗದೀಶ್- ಭ್ರಷ್ಟಾಚಾರ ನಿಗ್ರಹ ದಳ, ಆರ್.ಕೆ. ಪಾಟೀಲ್- ದಕ್ಷಿಣ ಉಪವಿಭಾಗ (ಹುಬ್ಬಳ್ಳಿ- ಧಾರವಾಡ), ಶಂಕರ ಕೆ. ಮಾರಿಹಾಳ- ಹಾವೇರಿ ಉಪವಿಭಾಗ, ಡಾ.ಕೆ.ಎಂ. ಸಂತೋಷ- ಚನ್ನಗಿರಿ ಉಪವಿಭಾಗ (ದಾವಣಗೆರೆ), ಶಿವಾನಂದ ಪವಾಡಶೆಟ್ಟಿ- ಗದಗ ಉಪವಿಭಾಗ, ಚಂದ್ರಕಾಂತ ಪೂಜಾರಿ – ಡಿಸಿಆರ್ಬಿ ಧಾರವಾಡ, ಪರಮೇಶ್ವರ ಹೆಗಡೆ- ಕೇಂದ್ರ ಉಪವಿಭಾಗ (ಮಂಗಳೂರು), ವಿ. ಸೂರ್ಯನಾರಾಯಣ ರಾವ್- ಎಸಿಬಿ, ವೆಂಕಟಪ್ಪ ನಾಯಕ- ಡಿಸಿಆರ್ಇ (ಬಾಗಲಕೋಟೆ), ಎಚ್.ಮಂಜುನಾಥ ಬಾಬು- ಸಿಟಿ ಎಸ್ಬಿ (ಬೆಂಗಳೂರು ನಗರ), ವಿಜಯ್ ಕುಮಾರ್ ಎಂ. ಸಂತೋಷ್- ಡಿಸಿಆರ್ಬಿ (ಹಾವೇರಿ), ಎಸ್.ಕೆ. ಪ್ರಹ್ಲಾದ್- ರಾಜ್ಯ ಗುಪ್ತದಳ ಮತ್ತು ಮಲ್ಲೇಶಪ್ಪ ಮಲ್ಲಾಪುರ ಅವರನ್ನು ರಾಜ್ಯಗುಪ್ತ ದಳಕ್ಕೆ ವರ್ಗಾವಣೆ ಮಾಡಲಾಗಿದೆ. ಇದೇ ರೀತಿ 100 ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಲಾಗಿದೆ.