ವಾರಣಾಸಿ: ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಕೋಮುಸೌಹಾರ್ದದ ಬೆಳವಣಿಗೆಯೊಂದು ನಡೆದಿದೆ. ಅಂದರೆ ಕಾಶಿ ದೇವಸ್ಥಾನಕ್ಕೆ ಜ್ಞಾನವ್ಯಾಪಿ ಮಸೀದಿಯಿಂದ 1,700 ಚದರಡಿ ಸ್ಥಳವನ್ನು ವರ್ಗಾಯಿಸಲಾಗಿದೆ. ದೇವಸ್ಥಾನದ ಕಾರಿಡಾರ್ಗಾಗಿ ಮಸೀದಿಗೆ ಹೊಂದಿಕೊಂಡಂತಿರುವ ಈ ಸ್ಥಳವನ್ನು ಕಾಶಿ ವಿಶ್ವನಾಥ ದೇವಸ್ಥಾನದ ಟ್ರಸ್ಟ್ಗೆ ಒಪ್ಪಿಸಲಾಗಿದೆ.
ಈ ಸ್ಥಳಕ್ಕೆ ಸಂಬಂಧಿತ ವಿಚಾರ ನ್ಯಾಯಾಲಯದಿದ್ದರೂ ಹೀಗೆ ಸೌಹಾರ್ದಯುತವಾಗಿ ಸ್ಥಳ ವರ್ಗಾವಣೆ ನಡೆದಿದೆ. ಪ್ರಕರಣ ಇನ್ನೂ ಕೋರ್ಟ್ನಲ್ಲಿದೆ. ಸರ್ಕಾರ ಕಾರಿಡಾರ್ ನಿರ್ಮಿಸುತ್ತಿದ್ದು, ಅದಕ್ಕಾಗಿ ಜಾಗ ಒತ್ತುವರಿ ಮಾಡಿಕೊಳ್ಳಬೇಕಿದೆ. ಹೀಗಾಗಿ ನಾವು ನಮ್ಮವರೊಂದಿಗೆ ಚರ್ಚಿಸಿದ್ದು, ನಮ್ಮ ಆಡಳಿತ ಮಂಡಳಿ 1,700 ಚದರಡಿ ಜಾಗ ಕಾಶಿ ವಿಶ್ವನಾಥ ದೇವಸ್ಥಾನದ ಕಾರಿಡಾರ್ಗಾಗಿ ಕೊಡಲು ಸಮ್ಮತಿ ಸೂಚಿಸಿದೆ ಎಂಬುದಾಗಿ ಅಂಜುಮಾನ್ ಇಂತಜಾಮಿಯಾ ಮಸೀದಿಯ ಜಂಟಿ ಕಾರ್ಯದರ್ಶಿ ಎಸ್.ಎಂ. ಯಾಸಿನ್ ತಿಳಿಸಿದ್ದಾರೆ.
ಇನ್ನು ದೇವಸ್ಥಾನಕ್ಕೆ ಹೊಂದಿಕೊಂಡಂತೆ ಇರುವ ಮಸೀದಿಯ ಜಾಗವನ್ನು ಕೊಟ್ಟಿರುವುದಕ್ಕೆ ಪ್ರತಿಯಾಗಿ ದೇವಸ್ಥಾನವೂ ಒಂದಷ್ಟು ಜಾಗವನ್ನು ಕೊಟ್ಟಿದೆ. ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿರುವ ದೇವಸ್ಥಾನಕ್ಕೆ ಸೇರಿದ 1,000 ಚದರಡಿ ಜಾಗವನ್ನು ಮಸೀದಿಗೆ ಕೊಡಲಾಗಿದೆ. (ಏಜೆನ್ಸೀಸ್)