ಮೈಸೂರು : ಉತ್ತರಾಖಂಡದ ಕೇದಾರನಾಥದಲ್ಲಿ ಸ್ಥಾಪನೆಯಾಗಲಿರುವ 12 ಅಡಿ ಎತ್ತರದ ಆದಿಗುರು ಶ್ರೀ ಶಂಕರಾಚಾರ್ಯರ ಪ್ರತಿಮೆಯನ್ನು ಮೈಸೂರು ನಗರದ ಶಿಲ್ಪಿಗಳು ಸಿದ್ಧಗೊಳಿಸಿದ್ದಾರೆ. ಕಲಾವಿದ ಅರುಣ ಯೋಗಿರಾಜ್ ಮತ್ತು ಅವರ 9 ಸಹಾಯಕರು ಕೆತ್ತಿರುವ ಈ ಪ್ರತಿಮೆಯನ್ನು ಜೂನ್ 17 ರಂದು ಟ್ರಕ್ನಲ್ಲಿ ಕೇದಾರನಾಥಕ್ಕೆ ಸಾಗಿಸಲಾಗುವುದು.
ಕೇದಾರನಾಥದಲ್ಲಿರುವ ಶಂಕರಾಚಾರ್ಯರ ಸಮಾಧಿ ಸ್ಥಳದಲ್ಲಿ ‘ಶ್ರೀ ಶಂಕರಾಚಾರ್ಯ ಅಧ್ಯಯನ ಪೀಠ ಮತ್ತು ಸಂಗ್ರಹಾಲಯ’ವನ್ನು ನಿರ್ಮಿಸಲು ಪ್ರಸ್ತಾವಿಸಲಾಗಿದೆ. ಈ ಸ್ಥಳದಲ್ಲಿ ಈ ಮೂರ್ತಿಯನ್ನು ಸ್ಥಾಪಿಸಲಾಗುವುದು. ಇದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿದ್ದು, ಕರ್ನಾಟಕದ ನಾಲ್ಕು ಆಸಕ್ತ ಶಿಲ್ಪಿಗಳಲ್ಲಿ ಯೋಗಿರಾಜ್ ಅವರನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿತ್ತು. ಸೆಪ್ಟೆಂಬರ್ 2020 ರಲ್ಲಿ ವರ್ಕ್ ಆರ್ಡರ್ ಬಂದ ಮೇಲೆ ಕೆತ್ತನೆ ಆರಂಭವಾಯಿತು ಎನ್ನಲಾಗಿದೆ.
ಇದನ್ನೂ ಓದಿ: ಗುಡ್ಡಗಾಡು ಪ್ರದೇಶಗಳಿಗೆ ಲಸಿಕೆ ತಲುಪಿಸಲು ಡ್ರೋನ್
ಆದಿ ಶಂಕರಾಚಾರ್ಯರು ಪದ್ಮಾಸನದಲ್ಲಿ ಕುಳಿತಿರುವಂತೆ ಚಿತ್ರಿಸಲಾಗಿರುವ ಈ ಮೂರ್ತಿಯ ಕೆಲಸ, ಕಳೆದ 7 ತಿಂಗಳಿಂದ ನಡೆಯುತ್ತಿದೆ. ಬೇಲೂರು-ಹಳೇಬೀಡು ದೇವಾಲಯಗಳಲ್ಲಿ ಬಳಸಲಾಗಿರುವ ಕೃಷ್ಣಶಿಲೆಯನ್ನು ಬಳಸಿ ಈ ಮೂರ್ತಿಯನ್ನು ಕೆತ್ತಲಾಗಿದ್ದು, ಬಿಸಿಲು-ಮಳೆಗಳಿಂದ ಹಾನಿಯಾಗುವುದಿಲ್ಲ ಎನ್ನಲಾಗಿದೆ. (ಏಜೆನ್ಸೀಸ್)
ಸೋಷಿಯಲಿಸಂ ಕೈಹಿಡಿದ ಮಮತಾ ಬ್ಯಾನರ್ಜಿ! ಬಂಗಾಳದಲ್ಲಲ್ಲ, ತಮಿಳುನಾಡಲ್ಲಿ!
VIDEO | ನೀರುತುಂಬಿದ ರಸ್ತೆಯಲ್ಲಿ ಕೂರಿಸಿ ಕಂಟ್ರಾಕ್ಟರ್ಗೆ ಕಸದ ಅಭಿಷೇಕ!