More

    112 ಕಾರ್ಖಾನೆಗಳು ಬಂದ್; ಮುಚ್ಚಿಸಿದ್ಯಾರು, ಯಾಕೆ?

    ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) 2011ರಿಂದ 2022ವರೆಗೆ ನಗರದಲ್ಲಿ ನಿಯಮ ಪಾಲಿಸದ 112 ಕಾರ್ಖಾನೆಗಳನ್ನು ಮುಚ್ಚಿಸಿದೆ.

    ಕರ್ನಾಟಕ ಜಲ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ಹಾಗೂ ಕಲುಷಿತ ಜಲಮೂಲ ಪತ್ತೆಯಾದ ಹಿನ್ನೆಲೆಯಲ್ಲಿ ಡೈಯಿಂಗ್ ಘಟಕಗಳು, ಗಾರ್ಮೆಂಟ್ ಸಂಬಂಧಿತ ಉತ್ಪನ್ನಗಳ ಘಟಕಗಳು ಹಾಗೂ ನೀರಿನ ಸೇವಾ ಘಟಕಗಳನ್ನು ಮುಚ್ಚಲಾಗಿದೆ.

    ಇದನ್ನೂ ಓದಿ: ವಿಮಾನದಲ್ಲೇ ಹೃದಯಾಘಾತ; ಆಕಾಶದಲ್ಲೇ ಹಾರಿಹೋದ ಪ್ರಾಣಪಕ್ಷಿ

    ಬೊಮ್ಮನಹಳ್ಳಿ ವಲಯ 46, ಆರ್.ಆರ್.ನಗರ ವಲಯ 18, ದಾಸರಹಳ್ಳಿ ವಲಯ 17, ಪೂರ್ವ16, ಮಹದೇವಪುರ ವಲಯ 11, ಪೀಣ್ಯ 3 ಹಾಗೂ ಯಲಹಂಕ ವಲಯ 1 ಸೇರಿ 112 ಕೈಗಾರಿಕೆಗಳನ್ನು ಬಂದ್ ಮಾಡಲಾಗಿದೆ. ಎರಡು ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ.

    ಇದನ್ನೂ ಓದಿ: ಮನೆ ಮುಂದೆ ಕಾರು ನಿಲ್ಲಿಸುತ್ತಾನೆಂದು ಜೀವವನ್ನೇ ತೆಗೆದ ದಾಯಾದಿಗಳು!

    ಸುರಕ್ಷತಾ ಕಾರ್ಯವಿಧಾನಗಳನ್ನು ಪಾಲಿಸದೆ ಜಲಮಾಲಿನ್ಯಗೊಳಿಸಿದ ಪರಿಣಾಮ 2021ರಲ್ಲಿ ಬಿಬಿಎಂಪಿ ವ್ಯಾಪ್ತಿಯ 16 ಡೈಯಿಂಗ್ ಘಟಕಗಳು ಮುಚ್ಚಿಸಲಾಗಿದೆ. ಅಲ್ಲದೆ, 2022ರಲ್ಲಿ 18 ಕೈಗಾರಿಕೆಗಳನ್ನು ಬಂದ್ ಮಾಡುವಂತೆ ಮಂಡಳಿ ಆದೇಶ ಹೊರಡಿಸಿದೆ. ಕೈಗಾರಿಕಾ ವಲಯದಲ್ಲಿ ರಾಜ್ಯ ಸರ್ಕಾರವು ಕೆಂಪು, ಕಿತ್ತಳೆ, ಹಸಿರು ಮತ್ತು ಬಿಳಿ ವರ್ಗಗಳಾಗಿ ವಿಂಗಡಿಸಿದೆ. ಹೆಚ್ಚು ಮಾಲಿನ್ಯ ಮಾಡುವ ಕೈಗಾರಿಕೆಗಳನ್ನು ಮುಲಾಜಿಲ್ಲದೆ ಬಂದ್ ಮಾಡಲಾಗುವುದು ಎಂದು ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

    ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಇಬ್ರಿಗೂ ಒಬ್ನೇ ಪತಿ, ಶಿಫ್ಟ್​ನಲ್ಲಿ ಸಂಸಾರ: ವಾರದಲ್ಲಿ 3 ದಿನ ಆ ಪತ್ನಿಗೆ, ಇನ್ನು 3 ದಿನ ಈ ಪತ್ನಿಗೆ; ಭಾನುವಾರ ಮಾತ್ರ ಗಂಡ ಫ್ರೀ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts