More

    ಹಾಲಪ್ಪಗೇ ಟಿಕೆಟ್ ಸಿಗೋದು ಡೌಟು; ಬೇಳೂರು ಗೋಪಾಲಕೃಷ್ಣ ಟಾಂಗ್

    ಸೊರಬ: ಸಾಗರದಲ್ಲಿ ಗೋಪಾಲಕೃಷ್ಣ ಬೇಳೂರು ಅವರಿಗೆ ಟಿಕೆಟ್ ಸಿಗುವುದಿಲ್ಲ ಎನ್ನುತ್ತಿದ್ದ ಹರತಾಳು ಹಾಲಪ್ಪ ಅವರಿಗೇ ಈಗ ಟಿಕೆಟ್ ದೊರೆಯುವುದು ಅನುಮಾನವಾಗಿದೆ ಎಂದು ಸಾಗರ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಟಾಂಗ್ ನೀಡಿದರು. ಬೇಳೂರು ಗೋಪಾಲಕೃಷ್ಣ ಮೊದಲು ಟಿಕೆಟ್ ಪಡೆಯಲು ಎಂದು ವ್ಯಂಗ್ಯವಾಡುತ್ತಿದ್ದ ಹಾಲಪ್ಪ ಅವರಿಗೆ ತಿರುಗೇಟು ನೀಡಿರುವ ಬೇಳೂರು, ಏನೇ ಆದರೂ ಹರತಾಳು ಹಾಲಪ್ಪ ಅವರೇ ನನ್ನ ಎದುರಾಳಿ ಆಗಬೇಕು ಎಂದು ಕುಟುಕಿದರು.
    ರಾಜ್ಯದ ಇತಿಹಾಸದಲ್ಲೆ ಅತ್ಯಂತ ಭ್ರಷ್ಟ ಸರ್ಕಾರ ಇದು. ಇದುವರೆಗೂ ಜನಸಾಮಾನ್ಯರಿಗೆ ಯಾವುದೇ ಯೋಜನೆಗಳನ್ನು ನೀಡಲಿಲ್ಲ. ವ್ಯತಿರಿಕ್ತ ತೆರಿಗೆಯಿಂದ ಬೆಲೆ ಏರಿಕೆಯಾಗಿ ಜನರ ಬದುಕು ಬೀದಿಪಾಲಾಗಿದೆ. ಆಶ್ರಯ, ಹಕ್ಕುಪತ್ರ ವಿತರಣೆ, ನಿವೇಶನ ಹಂಚಿಕೆ, ಸ್ಲಂ ಬೋರ್ಡ್ ಮನೆಗಳ ನಿರ್ಮಾಣಗಳಿಗೆ ಕಾಂಗ್ರೆಸ್ ಸರ್ಕಾರ ಹೆಚ್ಚಿನ ಒತ್ತು ನೀಡಿತ್ತು. ಬಿಜೆಪಿ ಸರ್ಕಾರ ಕೊನೆಯ ಹೊತ್ತಿನಲ್ಲಿ ಬೆರಳೆಣಿಕೆ ಮನೆಗಳಷ್ಟೆ ನೀಡಿದ್ದು ಅವುಗಳು ಕೂಡ ಅನುಷ್ಠಾನಗೊಂಡಿಲ್ಲ ಎಂದು ದೂರಿದರು.
    ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಪರವಾದ ಬಜೆಟ್ ಮಂಡನೆ ಮಾಡಿ ನಾಡಿನ ಪ್ರಗತಿಗೆ ಒತ್ತು ನೀಡಿತ್ತು. ಆದರೆ ಬಿಜೆಪಿ ಸರ್ಕಾರದಿಂದ ಜನಸಾಮಾನ್ಯರಿಗೆ ಯಾವುದೇ ಉಪಯೋಗವಾಗಿಲ್ಲ. ಯಡಿಯೂರಪ್ಪ ಅವರನ್ನು ಮುಂದಿಟ್ಟುಕೊಂಡು ಈ ಹಿಂದೆ ಚುನಾವಣೆ ಮಾಡಿದಾಗಲೇ 104 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದ ಬಿಜೆಪಿ, ಇಂದು ಬಸವರಾಜ ಬೊಮ್ಮಾಯಿ ಅವರನ್ನು ಮುಂದಿಟ್ಟುಕೊಂಡು ಸರ್ಕಾರ ರಚನೆ ಮಾಡುವ ಕನಸು ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts