More

    ಸೈನಿಕ ತರಬೇತಿ ನೀಡಲು ಜಾಗ ಕೊಡಿ

    ಡಂಬಳ: ಗ್ರಾಮೀಣ ಪ್ರದೇಶದ ಯುವಸಮೂಹ ಸೈನಿಕರಾಗುವ ಮೂಲಕ ದೇಶ ಸೇವೆ ಸಲ್ಲಿಸಲು ಸಿದ್ಧರಿದ್ದಾರೆ. ಆದರೆ, ಅವರಿಗೆ ಸೂಕ್ತ ತರಬೇತಿಯ ಅವಶ್ಯಕತೆಯಿದೆ. ಹೀಗಾಗಿ ಡಂಬಳದ ನಿವೃತ್ತ ಸೈನಿಕರು ಹಾಗೂ ಸೇವಾ ನಿರತ ಸೈನಿಕರ ಸಂಘದಿಂದ ಯುವಕರಿಗೆ ತರಬೇತಿ ನೀಡಲು ನಿರ್ಧರಿಸಿದ್ದು ಜಾಗ ಒದಗಿಸಬೇಕು ಎಂದು ನಿವೃತ್ತ ಸೈನಿಕರು ಡಂಬಳ ಪಿಡಿಒ ಎಸ್.ಕೆ. ಕವಡಲೆ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

    ಮಾಜಿ ಸೈನಿಕ ಎಚ್.ಎಂ. ಗಡಿಗಿ ಮಾತನಾಡಿ, ‘ಇಂದಿನ ಯುವ ಸಮೂಹ ಸದೃಢವಾಗಿರಬೇಕೆಂದರೆ ದುಶ್ಚಟಗಳಿಗೆ ದಾಸರಾಗದಂತೆ ನೋಡಿಕೊಳ್ಳಬೇಕು. ಯುವಕರಿಗೆ ಉತ್ತಮ ಮಾರ್ಗದರ್ಶನ ಹಾಗೂ ಸೂಕ್ತ ತರಬೇತಿ ನೀಡಿ ದೇಶ ಭಕ್ತರನ್ನಾಗಿ ಪರಿವರ್ತಿಸುವ ಕಾರ್ಯ ಮಾಡುವ ಉದ್ದೇಶ ಹೊಂದಿದ್ದೇವೆ. ರಾಷ್ಟ್ರ ನಿರ್ವಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದ್ದು, ಗಾ.ಪಂ.ನವರು ಜಾಗ ಕೊಟ್ಟರೆ ಸ್ಥಳೀಯ ಮತ್ತು ಸುತ್ತಮುತ್ತಲಿನ ಗ್ರಾಮೀಣ ಭಾಗದ ಯುವಕರಿಗೆ ಅನುಕೂಲವಾಗಲಿದೆ’ ಎಂದರು.

    ಮನವಿ ಸ್ವೀಕರಿಸಿ ಮಾತನಾಡಿದ ಪಿಡಿಒ ಎಸ್.ಕೆ. ಕವಡಲೆ, ಈ ಕುರಿತು ಗ್ರಾ.ಪಂ. ಆಡಳಿತಾಧಿಕಾರಿ ಜತೆ ರ್ಚಚಿಸಲಾಗುವುದು. ಸ್ಥಳೀಯ ಮುಖಂಡರು, ಹಿರಿಯರ ಸಲಹೆ ಪಡೆದು ಜಾಗ ಒದಗಿಸಲು ಪ್ರಯತ್ನಿಸ್ತುತೇನೆ ಎಂದು ಭರವಸೆ ನೀಡಿದರು.

    ಮಾಜಿ ಸೈನಿಕರಾದ ಅಲ್ಲಾಭಕ್ಷಿ ಬೆನಕೊಪ್ಪ, ಕೃಷ್ಣ ಕಟ್ಟೆಣವರ, ಹನುಮಂತ ಮೇಗೂರು, ಸೈನಿಕ ಖಾಸೀಸಾಬ್ ಬೆನಕೊಪ್ಪ, ರೇವಣಸಿದ್ದಯ್ಯ ಹಿರೇಮಠ, ರುದ್ರಪ್ಪ ಏಣಗಿ, ಮಂಜುನಾಥ ಪೂಜಾರ, ಮಹೇಶ ಗುಡ್ಡದ, ಯಮನೂರಪ್ಪ ದೊಡ್ಡಮನಿ, ನಿಂಗಪ್ಪ ಮಾದರ, ವರ್ಧಮಾನ ಪಾಟೀಲ, ಧೂಳಪ್ಪ ಕರಳ್ಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts