More

    ಚುನಾವಣೆ ಸುಸೂತ್ರಕ್ಕೆ ಕ್ರಮ ವಹಿಸಿರಿ

    ಕೋಲಾರ: ಚುನಾವಣೆ ಪ್ರಕ್ರಿಯೆ ಯಾವುದೇ ಗೊಂದಲಗಳಿಲ್ಲದೇ ಸುಸೂತ್ರವಾಗಿ ನಡೆಯಲು ಮತದಾನ ಕಾರ್ಯಕ್ಕೆ ನೇಮಕಗೊಂಡಿರುವ ಮತಗಟ್ಟೆ ಸಿಬ್ಬಂದಿ ಕ್ರಮವಹಿಸಿ ಮತ್ತು ಮತಗಟ್ಟೆಯಲ್ಲಿ ಕಲ್ಪಿತ ಮತದಾನ ಸಕಾಲಕ್ಕೆ ಮುಗಿಸಿ ನೈಜ ಮತದಾನಕ್ಕೆ ಸಿದ್ಧತೆ ನಡೆಸಿಕೊಳ್ಳಿ ಎಂದು ತಹಸೀಲ್ದಾರ್ ಹರ್ಷವರ್ಧನ್ ಸೂಚಿಸಿದರು.

    ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬುಧವಾರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆ ಅಧಿಕಾರಿಗಳಾಗಿ ನೇಮಕಗೊಂಡಿರುವ ಸಿಬ್ಬಂದಿಗೆ ನಡೆದ 2ನೇ ಹಂತದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅಕ್ರಂಪಾಷಾ, ವಿಭಾಗಾಧಿಕಾರಿ ವೆಂಕಟಲಕ್ಷ್ಮಿ ಮಾರ್ಗದರ್ಶನದಲ್ಲಿ ತರಬೇತಿ ನಡೆಸಲಾಗುತ್ತಿದೆ ಎಂದರು.

    ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಏ.೨೬ರಂದು ಚುನಾವಣೆ ನಿಗದಿಯಾಗಿದೆ. ಈ ಕಾರ್ಯ ಚೆನ್ನಾಗಿ ನಡೆಯುವಲ್ಲಿ ನಿಮ್ಮ ಪಾತ್ರ ಅತಿ ಮುಖ್ಯ, ನಿಮಗೆ ನೀಡುತ್ತಿರುವ ತರಬೇತಿ ಪ್ರಯೋಜನಪಡೆದುಕೊಳ್ಳಿ, ಸಮಸ್ಯೆಗಳು ಎದುರಾಗದಂತೆ ಕಾರ್ಯನಿರ್ವಹಿಸಿ ಎಂದರು.

    ಪ್ರತಿ ಮತಗಟ್ಟೆಯಲ್ಲೂ ಅಣುಕು ಮತದಾನ:
    ಈಗಾಗಲೇ ರೂಪಿಸಲಾಗಿರುವ ಯೋಜನೆಯಂತೆಯೇ ಪ್ರತಿಯೊಂದು ಕೆಲಸವನ್ನು ಸಮರ್ಪಕವಾಗಿ ಮಾಡಿಕೊಳ್ಳಬೇಕು. ಮತದಾನಕ್ಕೆ ಅಂದು ಬೆಳಗ್ಗೆ ೭ರಿಂದ ಸಂಜೆ ೬ ರವರೆಗೆ ಕಾಲಾವಕಾಶ ನೀಡಲಾಗಿದ್ದು, ತಾವು ಬೆಳಗ್ಗೆ ಮತದಾನ ಆರಂಭಕ್ಕೂ ಮುನ್ನ ಅಣುಕು ಮತದಾನವನ್ನು ಅಭ್ಯರ್ಥಿಗಳ ಪರ ಏಜೆಂಟರ ಸಮ್ಮುಖದಲ್ಲಿ ಕಡ್ಡಾಯವಾಗಿ ನಡೆಸಬೇಕು ಎಂದು ಸಲಹೆ ನೀಡಿದರು. ಪ್ರತಿ ಅಭ್ಯರ್ಥಿಗೂ ಮತ ಹಾಕಿ, ಖಾತ್ರಿ ಚೀಟಿಯನ್ನು ಅವರಿಗೆ ತೋರಿಸಿ, ಎಲ್ಲ ಪ್ರಕ್ರಿಯೆ ಮುಗಿಸಿ, ಅದನ್ನು ಅಳಿಸಿದ ಬಳಿಕ ನೈಜ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ತಹಸೀಲ್ದಾರ್ ತಿಳಿಸಿದರು.

    1320 ಸಾವಿರ ಮಂದಿಗೆ ಚುನಾವಣೆ ತರಬೇತಿ:
    ಕೋಲಾರ ತಾಲೂಕಿನಲ್ಲಿ ಈಗಾಗಲೇ ಪ್ರತಿ ಮತಗಟ್ಟೆಗೆ ತಲಾ ಒಬ್ಬ ಪ್ರಿಸೆಂಡಿಂಗ್, ಒಬ್ಬ ಸಹಾಯಕ ಪ್ರಿಸೆಂಡಿಂಗ್ ಅಽಕಾರಿ ಹಾಗೂ ಇಬ್ಬರು ಪೋಲಿಂಗ್ ಅಧಿಕಾರಿಗಳನ್ನು ನೇಮಕಾತಿ ಮಾಡಿ ಆದೇಶ ಪತ್ರಗಳನ್ನು ನೀಡಲಾಗಿದೆ ಎಂದು ತಿಳಿಸಿದರು. ಕೋಲಾರ ತಾಲೂಕಿನಲ್ಲಿ ೩೩೦ ಪಿಆರ್‌ಒ ಮತ್ತು 320 ಎಪಿಆರ್‌ಒ ಹಾಗೂ 660 ಪೋಲಿಂಗ್ ಅಧಿಕಾರಿಗಳಿದ್ದು ಪಿಆರ್‌ಒ, ಎಪಿಆರ್‌ಒಗಳಿಗೆ ಈಗಾಗಲೇ ಒಂದು ಸುತ್ತಿನ ತರಬೇತಿ ಮುಗಿದಿದ್ದು, ಇದು ಎರಡನೇ ಸುತ್ತಿನ ತರಬೇತಿಯಾಗಿದೆ ಎಂದು ತಹಸೀಲ್ದಾರ್ ಹೇಳಿದರು.
    ಅದೇ ರೀತಿ ಮಾಲೂರು, ಬಂಗಾರಪೇಟೆ, ಮುಳಬಾಗಿಲು, ಕೆಜಿಎ-1, ಶ್ರೀನಿವಾಸಪುರದಲ್ಲಿಯೂ ಇದೇ ರೀತಿ ತರಬೇತಿ ನಡೆಸಲಾಗುತ್ತಿದೆ ಎಂದರು.
    ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಉಪನ್ಯಾಸಕ ಗೋಪಿಕೃಷ್ಣನ್, ಮತಗಟ್ಟೆಯಲ್ಲಿ 49ಎಂ. 49 ಎಂ.ಎ ಅಡಿ ಎದುರಾಗಬಹುದಾದ ಚಾಲೆಂಜ್ ವೋಟ್, ಟೆಂಡರ್ಡ್ ವೋಟ್, ಸರ್ವಿಸ್ ವೋಟ್ ಪ್ರಕರಣಗಳನ್ನು ನಿಭಾಯಿಸುವ ಕುರಿತು ಮತಗಟ್ಟೆ ಅಽಕಾರಿಗಳಿಗೆ ಮಾಹಿತಿ ನೀಡಿದರು.

    ಮತದಾನ ಯಂತ್ರಗಳ ಬಳಕೆ ಕುರಿತು ಪ್ರಾಯೋಗಿಕವಾಗಿ ಮತ್ತು ಪವರ್‌ಪಾಯಿಂಟ್ ಪ್ರಸೆಂಟೇಷನ್ ಮೂಲಕ ತರಬೇತಿ ನೀಡಿದ ಅವರು, ಯಂತ್ರಗಳ ಜೋಡಣೆ, ಬಳಕೆ, ಅವುಗಳ ನಿರ್ವಹಣೆ ಕುರಿತಂತೆ ತಿಳಿಸಿಕೊಟ್ಟರು.

    ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ, ಕ್ಷೇತ್ರ ಸಮನ್ವಯಾಽಕಾರಿ ಪ್ರವೀಣ್, ಮಾಸ್ಟರ್ ಟ್ರೆÊರ‍್ಸ್ ಹಾಗೂ ಸೆಕ್ಟರ್ ಅಽಕಾರಿಗಳಾದ ಗೋಪಿಕÊಷ್ಣನ್, ಟಿ.ಕೆ.ನಟರಾಜ್, ಉದಯಕುಮಾರ್, ಚಂದ್ರಪ್ಪ, ಗಂಗಾಧರಮೂರ್ತಿ,ಮುಕುAದ ಮತ್ತಿತರರು ಕಾರ್ಯನಿರ್ವಹಿಸಿದ್ದು, ಎಸಿ ಕಚೇರಿ ತಹಸೀಲ್ದಾರ್ ಮಂಜುನಾಥ್, ಗ್ರೇಡ್೨ ತಹಸೀಲ್ದಾರ್ ಹಂಸಮಾರಿಯಾ, ಶಿರಸ್ತೇದಾರ್‌ಗಳಾದ ಶ್ರೀನಿವಾಸಮೂರ್ತಿ, ಭಾಸ್ಕರ್, ಆರ್‌ಐಗಳಾದ ರಾಜೇಂದ್ರಪ್ರಸಾದ್, ರಮೇಶ್,ಲೋಕೇಶ್, ಮಂಜುನಾಥ್ ನಾರಾಯಣಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts