ಮಂಗಳೂರು: ಶ್ವಾನವನ್ನು ಅಟ್ಟಿಸಿಕೊಂಡು ಬಂದ ಚಿರತೆ ಶೌಚಗೃಹದಲ್ಲಿ ಬಂಧಿಯಾದ ಘಟನೆ ಸುಬ್ರಹ್ಮಣ್ಯ ಸಮೀಪ ಕೈಕಂಬದಲ್ಲಿ ನಡೆದಿದೆ.
ಇಲ್ಲಿನ ವಿವಾಸಿ ರೇಗಪ್ಪ ಎಂಬವರ ಮನೆಯ ಶ್ವಾನವನ್ನು ಚಿರತೆ ಅಟ್ಟಿಸಿಕೊಂಡು ಬಂದಿದೆ. ಶ್ವಾನ ಚಿರತೆಯಿಂದ ತಪ್ಪಿಸಿಕೊಳ್ಳಲು ಶೌಚಗೃಹಕ್ಕೆ ನುಗ್ಗಿದೆ. ಈ ಸಂದರ್ಭದಲ್ಲಿ ಮನೆಯವರು ಶೌಚಗೃಹದ ಬಾಗಿಲು ಹಾಕಿದ್ದಾರೆ. ಈಗ ಶ್ವಾನ ಮತ್ತು ಚಿರತೆ ಶೌಚ ಗೃಹದಲ್ಲಿ ಬಂಧಿಯಾಗಿವೆ. ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.