More

    ಸಕ್ಸಸ್ ಆಗೋವರೆಗೂ ಪ್ರಯತ್ನ ನಿಲ್ಲಿಸದಿರಿ

    ಕಲಬುರಗಿ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಆತ್ಮವಿಶ್ವಾಸ, ಪ್ರಯತ್ನದ ಜತೆಗೆ ಗುರಿಯತ್ತ ಸಾಗಿ ಜೀವನ ರೂಪಿಸಿಕೊಳ್ಳಬೇಕು. ಗುರಿ ಬದಲಾಗಬಹುದು. ಆದರೆ ಸಫಲತೆ ಸಿಗುವವರೆಗೂ ನಿರಂತರ ಪರಿಶ್ರಮ ಜಾರಿಯಲ್ಲಿರಬೇಕು ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ್ ಸಲಹೆ ನೀಡಿದರು.

    ಶರಣಬಸವ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಿರಂತರ ಪರಿಶ್ರಮದಿಂದ ಜೀವನದಲ್ಲಿ ಸಫಲರಾಗಲು ಸಾಧ್ಯ. ಗುರುಗಳ ಮಾರ್ಗದರ್ಶನ, ಪ್ರಾಮಾಣಿಕತೆಯಿಂದ ಪ್ರಯತ್ನದ ಜತೆಗೆ . ಜತೆಗೆ ಬುದ್ಧಿವಂತಿಕೆಯಿAದ ಕೆಲಸ ಮಾಡಬೇಕು. ವ್ಯಕ್ತಿತ್ವ ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದರು.

    ಈ ವೇಳೆ ವಿವಿಯ ಎಲೆಕ್ಟಿಕಲ್ ಮತ್ತು ಇಲೆಕ್ಟಾçನಿಕ್ಸ್ ವಿಭಾಗದಿಂದ ಇಂಧನ ಸಂರಕ್ಷಣೆ ಮತ್ತು ಇಂಧನ ದಕ್ಷತೆ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಕ್ರೆಡಲ್ ಪ್ರಾಜೆಕ್ಟ್ ಇಂಜಿನಿಯರ್ ದಿನೇಶಕುಮಾರ್ ಡಿ.ಕೆ. ಮಾತನಾಡಿ, ಕಲ್ಲಿದ್ದಲು, ಡೀಸೆಲ್, ತೈಲದ ವಿವಿಧ ಸಂಪನ್ಮೂಲಗಳ ಮೂಲಕ 400200 ಮೆಗಾವ್ಯಾಟ್ ವಿದ್ಯುತ್ ಪಡೆಯುತ್ತಿದ್ದು, ನವೀಕರಿಸಬಹುದಾದ ಇಂಧನ ಶಕ್ತಿಯ ಮೂಲಕ ಕೇವಲ ಶೇ.39ರಷ್ಟು ವಿದ್ಯುತ್ ಪಡೆಯುತ್ತಿದ್ದೇವೆ. ಈ ಪ್ರಮಾಣ ಹೆಚ್ಚಾಗಬೇಕಿದೆ ಎಂದರು.

    ಕರ್ನಾಟಕದಲ್ಲಿ 30200 ಮೆಗಾವ್ಯಾಟ್ ಶಕ್ತಿಯು ಸುಮಾರು ಶೇ.55 ರಷ್ಟು ಇಂಧನ ಶಕ್ತಿಯು ನವೀಕರಿಸಬಹುದಾದ ಮೂಲಗಳಿಂದ ಪಡೆಯಲಾಗುತ್ತಿದೆ. ಕೇಂದ್ರ ಸರ್ಕಾರವು ಸೌರ ನವೀಕರಿಸಬಹುದಾದ ಇಂಧನ ನೀತಿ ಘೋಷಿಸಿದೆ. 500 ಗಿಗಾವ್ಯಾಟ್‌ನಷ್ಟು ವಿದ್ಯುತ್ ನಾವು ಉಳಿಸಲು ಯೋಚಿಸುತ್ತಿದ್ದೇವೆ. ಇದಕ್ಕಾಗಿ ರಾಜ್ಯವ್ಯಾಪಿ 10 ಇಂಜಿನಿಯರಿAಗ್ ಕಾಲೇಜುಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಶರಣಬಸವ ವಿವಿ ಇಂಜಿನಿಯರಿAಗ್ ಕಾಲೇಜು ಒಂದು ಎಂದರು.

    ವಿದ್ಯುತ್ ಮಿತವಾಗಿ ಬಳಸಬೇಕು. ಈ ಕುರಿತು ಅರಿವು ಮೂಡಿಸಬೇಕು. ಪಾವಗಢದಲ್ಲಿ ಅತಿ ದೊಡ್ಡ ಸೌರಶಕ್ತಿ ಯೋಜನೆ ಕೈಗೊಂಡಿದ್ದು, ಸೌರಶಕ್ತಿ ಉತ್ಪಾದನೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಶರಣಬಸವ ವಿಶ್ವವಿದ್ಯಾಲಯದ ಮೇಲ್ಛಾವಣಿ ಮೇಲೆ ಸೌರಶಕ್ತಿ ಪ್ಯಾನಲ್ಸ್ ಅಳವಡಿಸಿ ವಿದ್ಯುತ್ ಉತ್ಪಾದಿಸುತ್ತಿರುವುದು ಶ್ಲಾಘನೀಯ ಎಂದರು.

    ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಡಾ.ನಿರಂಜನ್ ನಿಷ್ಠಿ ಮಾತನಾಡಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರ ಜನ್ಮ ದಿನಾಚರಣೆಯೂ ನಡೆಯಿತು. 2021-22ರ ಶೈಕ್ಷಣಿಕ ವರ್ಷದಲ್ಲಿ ಪಿಎಚ್‌ಡಿ ಪೂರೈಸಿದ ಅಧ್ಯಾಪಕರು, ವಿವಿಧ ವಿಭಾಗಗಳ ಪ್ರತಿಭಾವಂತ ವಿದ್ಯಾರ್ಥಿ, ಪ್ರಾಧ್ಯಾಪಕರನ್ನು ಸತ್ಕರಿಸಲಾಯಿತು.

    ವಿವಿಯ ಸಮ ಕುಲಪತಿ ಡಾ.ವಿ.ಡಿ.ಮೈತ್ರಿ, ಕುಲಸಚಿವ (ಮೌಲ್ಯಮಾಪನ) ಡಾ.ಬಸವರಾಜ ಮಠಪತಿ, ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ಡೀನ್ ಡಾ.ಶಿವಕುಮಾರ ಜವಳಗಿ, ಡಾ.ಎಸ್.ಜಿ.ಡೊಳ್ಳೆಗೌಡರ್, ಡಾ. ಶಶಿಕಲಾ, ಸಂಪನ್ಮೂಲ ವ್ಯಕ್ತಿಗಳಾದ ಡಾ.ಬಸವನಗೌಡ ರೋಣದ್, ಮಾಲಿನಿ ಶಿವಕುಮಾರ ಇದ್ದರು. ಪ್ರೊ.ಶೃತಿ ಪಾಟೀಲ್ ನಿರೂಪಣೆ ಮಾಡಿದರು. ಡಾ.ಅನಿಲಕುಮಾರ್ ಬಿಡವೆ ಸ್ವಾಗತಿಸಿದರು. ಪ್ರೊ.ಜಗದೀಶ ಪಾಟೀಲ್ ವಂದಿಸಿರು.

    ಪೂಜ್ಯ ಡಾ.ಅಪ್ಪಾಜಿಯವರು ಅನ್ನದ ಜತೆಗೆ ಶಿಕ್ಷಣ ದಾಸೋಹಕ್ಕೂ ಒತ್ತು ನೀಡಿದ್ದಾರೆ. ವಿವಿಯಲ್ಲಿ 20ಕ್ಕೂ ಹೆಚ್ಚು ವಿಭಾಗಗಳಿದ್ದು, ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ತಮ್ಮ ಕನಸು ನನಸು ಮಾಡಿಕೊಳ್ಳುತ್ತಿರುವುದು ಸಂತಸದ ಸಂಗತಿ. ಶಿಕ್ಷಣ ಜತೆಗೆ ಅದರ ಮೌಲ್ಯ ಎತ್ತಿ ಹಿಡಿದಿರುವುದು ಶ್ಲಾಘನೀಯ.
    | ಭುವನೇಶ ಪಾಟೀಲ್
    , ಆಯುಕ್ತ, ಮಹಾನಗರ ಪಾಲಿಕೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts