More

    ಸಂಘದ ಯೋಜನೆಗಳ ಸೌಲಭ್ಯ ಪಡೆಯಿರಿ

    ಪರಶುರಾಮಪುರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಸದಸ್ಯತ್ವ ಪಡೆದ ಎಲ್ಲರೂ ಸಂಸ್ಥೆಯ ಯೋಜನೆಗಳ ಸಮಗ್ರ ಮಾಹಿತಿ ಪಡೆದು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಎಸ್‌ಕೆಡಿಆರ್‌ಡಿಪಿ ಯೋಜನೆಯ ನಿರ್ದೇಶಕ ವಿನಯ್‌ಕುಮಾರ ಹೇಳಿದರು.

    ಸ್ಥಳೀಯ ಗ್ರಾಪಂ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವ ಸಹಾಯ ಸಂಘದ ಸದಸ್ಯರಿಗೆ ಆಯೋಜಿಸಿದ್ದ ಯೋಜನೆಗಳ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

    ಪಿಆರ್‌ಪುರ ಧರ್ಮಸ್ಥಳ ಸಂಸ್ಥೆಯ ಒಕ್ಕೂಟದ ಅಧ್ಯಕ್ಷ ಈಶ್ವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಿಆರ್‌ಪುರ ಹೋಬಳಿ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಎಲ್ಲ ವರ್ಗದ ಮಹಿಳೆಯರು, ರೈತರು, ಸ್ವ ಸಹಾಯ ಸಂಘ ರಚಿಸಿಕೊಂಡು ಸಂಸ್ಥೆಯ ಸೌಕರ್ಯ ಪಡೆದುಕೊಂಡು ಕೃಷಿ, ಗೃಹ ಕೈಗಾರಿಕೆ, ಪಶುಪಾಲನೆ, ಹೈನುಗಾರಿಕೆ, ವ್ಯಾಪಾರ, ಕುಲ ಕಸುಬುಗಳಲ್ಲಿ ತೊಡಗಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ ಎಂದು ತಿಳಿಸಿದರು.

    ಇದೇ ವೇಳೆ ಪಿಆರ್‌ಪುರ ವಲಯ ಮೇಲ್ವಿಚಾರಕ ಮಂಜುನಾಥ ಗೊಂಡ, ತಾಲೂಕು ಯೋಜನಾಧಿಕಾರಿ ಶಶಿಕಲಾ, ಸಂಸ್ಥೆಯ ವಿವಿಧ ನೂತನ ಯೋಜನೆಗಳು ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

    ಈ ಸಂದರ್ಭದಲ್ಲಿ ಸೇವಾಪ್ರತಿನಿಧಿಗಳಾದ ಅನುರಾಧಾ, ಮಂಗಳಗೌರಿ, ಅಂಬುಜಾಕ್ಷಿ, ಸ್ವ ಸಹಾಯ ಸಂಘದ ದೇವಿಕಾ, ರತ್ನಾ, ಸುಶೀಲಮ್ಮ, ಲಕ್ಷ್ಮೀದೇವಿ, ಸುಜಾತಾ, ಲಕ್ಷ್ಮೀ, ಮಂಜುಳಾ, ಪಿಆರ್‌ಪುರ ವಲಯದ ರೈತರು ಮಹಿಳೆಯರು ಗ್ರಾಮಸ್ಥರು ಇದ್ದರು .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts