More

    ಶಿರಸಿ ಮಾರಿಕಾಂಬೆ ಸನ್ನಿಧಿಯಲ್ಲಿ ಸಪ್ತಪದಿ

    ಶಿರಸಿ: ಮುಜರಾಯಿ ಇಲಾಖೆ ಸಹಯೋಗದಲ್ಲಿ ನಗರದ ಮಾರಿಕಾಂಬಾ ದೇವಾಲಯದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಎರಡು ಜೋಡಿ ಸಪ್ತಪದಿ ತುಳಿದರು. ಇಲ್ಲಿನ ಮೃತ್ಯುಂಜಯ ಹಾಗೂ ಅನುಷಾ ಮತ್ತು ತಾಲೂಕಿನ ಕುಪ್ಪಗಡ್ಡೆಯ ಫಕೀರಪ್ಪ ಭೋವಿ ಹಾಗೂ ಹಾನಗಲ್​ನ ಅನ್ನಪೂರ್ಣೆಶ್ವರಿ ವಡ್ಡರ ಹಸೆಮಣೆ ಏರಿದರು. ಸಂಬಂಧಿಕರು, ಮಾರಿಕಾಂಬಾ ದೇವಾಲಯದ ಧರ್ಮದರ್ಶಿಗಳು, ದೇವಿಯ ಭಕ್ತರು ಶುಭ ಘಳಿಗೆಗೆ ಸಾಕ್ಷಿಯಾದರು. ದೇವಾಲಯದ ವತಿಯಿಂದ ವಧು-ವರರಿಗೆ ಮದುವೆ ಬಟ್ಟೆ, ಹಾರ, ತಾಳಿ ಒದಗಿಸಲಾಗಿತ್ತು. ಮಾರಿಕಾಂಬಾ ದೇವಾಲಯದ ಅಧ್ಯಕ್ಷ ವೆಂಕಟೇಶ ನಾಯ್ಕ, ಉಪಾಧ್ಯಕ್ಷ ಮನೋಹರ ಮಲ್ಮನೆ, ಧರ್ಮದರ್ಶಿಗಳಾದ ಶಶಿಕಲಾ ಚಂದ್ರಾಪಟ್ಟಣ, ಲಕ್ಷ್ಮಣ ಕಾನಡೆ, ಶಾಂತಾರಾಮ ಹೆಗಡೆ ಉಪಸ್ಥಿತರಿದ್ದು, ವಧು ವರರಿಗೆ ದೇವಿಯ ಪ್ರಸಾದ ನೀಡಿ ಶುಭ ಹಾರೈಸಿದರು. ವೆಂಕಟೇಶ ನಾಯ್ಕ ಮಾತನಾಡಿ, ದೇವಸ್ಥಾನದಲ್ಲಿ ಸಾಮೂಹಿಕ ವಿವಾಹ ನಡೆಯುತ್ತಿದ್ದು, ಮುಂದಿನ ದಿನಗಳಲ್ಲೂ ಸರಳ ವಿವಾಹಗಳಿಗೆ ದೇವಸ್ಥಾನ ಆದ್ಯತೆ ನೀಡಲಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts