More

    ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌ಗೆ ಸನ್ಮಾನ

    ಖಾನಾಪುರ: ಸ್ಥಳೀಯ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರನ್ನು ಬ್ಲಾಕ್ ಕಾಂಗ್ರೆಸ್ ಖಾನಾಪುರ ಘಟಕ ಮತ್ತು ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅಭಿಮಾನಿಗಳ ವತಿಯಿಂದ ಪಟ್ಟಣದ ಶಿವಸ್ಮಾರಕ ಸಭಾಗೃಹದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

    ಕಾಂಗ್ರೆಸ್ ಪಕ್ಷದ ಅಖಿಲ ಭಾರತ ಪಾದಯಾತ್ರೆ ಮತ್ತು ಮ್ಯಾರಥಾನ್ ಸಮಿತಿಗೆ ಅಂಜಲಿ ನಿಂಬಾಳ್ಕರ್ ಅವರು ನೇಮಕಗೊಂಡ ಹಿನ್ನೆಲೆಯಲ್ಲಿ ಮತ್ತು ಹಾನಗಲ್ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಿದ ಕಾರಣಕ್ಕೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದಕ್ಕೂ ಮುಂಚೆ ಶಾಸಕರನ್ನು ಪಟ್ಟಣದ ಜಗಜ್ಯೋತಿ ಬಸವೇಶ್ವರ ವೃತ್ತದಿಂದ ಶಿವಸ್ಮಾರಕ ವೃತ್ತದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಕರೆತರಲಾಯಿತು.

    ಮಾರ್ಗಮಧ್ಯದ ಬಸವೇಶ್ವರ, ಡಾ.ಅಂಬೇಡ್ಕರ್ ಮತ್ತು ಛತ್ರಪತಿ ಶಿವಾಜಿ ಪುತ್ಥಳಿಗೆ ಶಾಸಕರು ಮತ್ತು ಕಾಂಗ್ರೆಸ್ ಮುಖಂಡರು ಗೌರವ ಸಲ್ಲಿಸಿದರು. ಬಳಿಕ ಶಿವಸ್ಮಾರಕ ಸಭಾಗೃಹದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕರನ್ನು ಸನ್ಮಾನಿಸಲಾಯಿತು.

    ಪಕ್ಷದ ಬ್ಲಾಕ್ ಅಧ್ಯಕ್ಷ ಮಹಾದೇವ ಕೋಳಿ, ಮುಖಂಡರಾದ ಮಹಾಂತೇಶ ರಾಹುತ, ಮಧು ಕವಳೇಕರ, ಜಾಕಿ ಫರ್ನಾಂಡಿಸ್, ಗೌಸಲಾಲ ಪಟೇಲ, ಮಹಾಂತೇಶ ಕಲ್ಯಾಣಿ, ಅನಿತಾ ದಂಡಗಲ್, ಸಂಗಮೇಶ ವಾಲಿ, ಸಂತೋಷ ಹಂಜಿ, ದೇಮಣ್ಣ ಬಸರಿಕಟ್ಟಿ, ಮಹಾಂತೇಶ ಸಂಬರಗಿ, ಗುಡ್ಡುಸಾಬ್ ತೇಕಡಿ, ಸೂರ್ಯಕಾಂತ ಕುಲಕರ್ಣಿ, ಭಾರತಿ ಪಾಟೀಲ, ವಾಸುದೇವ ಚೌಗುಲೆ, ಸುರೇಶ ಹಾಗೂ ಅನಿತಾ ದಂಡಗಲ್ ಇತರರು ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts