More

    ಶ್ರೀ ಶಿವಕುಮಾರಸ್ವಾಮೀಜಿ 5ನೇ ವರ್ಷದ ಪುಣ್ಯ ಸ್ಮರಣೆ

    ಕೊಳ್ಳೇಗಾಲ: ಪಟ್ಟಣದ ಜನನಿ ಆಸ್ಪತ್ರೆ ಹಿಂಭಾಗವಿರುವ ಮೋದಿ ಟೀ ಸ್ಟಾಲ್ ಆವರಣದಲ್ಲಿ ಭಾನುವಾರ ಶ್ರೀ ಶಿವಕುಮಾರಸ್ವಾಮೀಜಿ ಅವರ 5ನೇ ವರ್ಷದ ಪುಣ್ಯ ಸ್ಮರಣೆ ಏರ್ಪಡಿಸಲಾಗಿತ್ತು.

    ಮೋದಿ ಟೀ ಸ್ಟಾಲ್ ಸ್ನೇಹಿತರ ಬಳಗ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ವೇಳೆ ತಿಮ್ಮರಾಜೀಪುರ, ಬೂದಿತಿಟ್ಟು, ಮುಡಿಗುಂಡ, ಮುಳ್ಳೂರು, ಮಧುವನಹಳ್ಳಿ ಸೇರಿದಂತೆ ಗ್ರಾಮಾಂತರ ಭಜನಾ ತಂಡದ ವತಿಯಿಂದ ಭಜನೆ ಕಾರ್ಯಕ್ರಮ ನಡೆಯಿತು. ಶ್ರೀಗಳ ಪುಣ್ಯ ಸ್ಮರಣೆಯಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರಿಗೆ ಬಳಗದಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

    ಮೋದಿ ಟೀ ಸ್ಟಾಲ್ ಬಳಗದ ಸದಸ್ಯ ಬೂದಿತಿಟ್ಟು ಗುರುಸ್ವಾಮಿ ಮಾತನಾಡಿ, ತುಮಕೂರಿನ ಸಿದ್ಧಗಂಗಾಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಮಠಕ್ಕೆ ಬರುವ ಲಕ್ಷಾಂತರ ಬಡ ಮಕ್ಕಳಿಗೆ ಜಾತಿ-ಧರ್ಮ ಭೇದವಿಲ್ಲದೆ ವಿದ್ಯೆ, ವಸತಿ, ದಾಸೋಹ ನೀಡಿದ್ದರು. ಇಡೀ ಸಮಾಜದ ಏಳಿಗೆಗೆ ಶ್ರಮಿಸಿರುವ ಅವರ ಸೇವೆ ಅನನ್ಯವಾದುದು ಎಂದರು.

    ಶ್ರೀಗಳನ್ನು ತ್ರಿವಿಧ ದಾಸೋಹಿ ಎಂದು ಕರೆಯಲಾಗುತ್ತದೆ. ಮಠದಲ್ಲಿ ಇಂದಿಗೂ ಸಾವಿರಾರು ಮಕ್ಕಳಿಗೆ ದಾಸೋಹ ಏರ್ಪಡಿಸಲಾಗಿದೆ ಎಂದರು.
    ಮೋದಿ ಟೀ ಸ್ನೇಹಿತರ ಬಳಗದ ಎಂ.ಬಸವರಾಜಪ್ಪ, ಬೂದಿತಿಟ್ಟು ಗುರುಸ್ವಾಮಿ, ಮಹದೇವಸ್ವಾಮಿ, ಲೋಕೇಶ್, ರಾಜೇಶ್, ಸ್ವಾಮಿ, ವೃಷಭೇಂದ್ರ, ಪ್ರಕಾಶ್, ಸುರೇಶ್ ಬೂದಿತಿಟ್ಟು ಇತರರು ಇದ್ದರು.

    ಗಣ್ಯರಿಂದ ನಮನ: ಮೋದಿ ಟೀ ಸ್ಟಾಲ್ ಬಳಗ ಏರ್ಪಡಿಸಿದ್ದ ಡಾ. ಶಿವಕುಮಾರಸ್ವಾಮಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಮಾಜಿ ಶಾಸಕ ಎಸ್. ಬಾಲರಾಜು, ಜಿ.ಪಂ ಮಾಜಿ ಸದಸ್ಯ ಮುಳ್ಳೂರು ಕಮಲ್, ಮುಖಂ ಡ ನಾರಾಯಣ್ ಪ್ರಸಾದ್, ಕವಿತಾ, ರಾಮಕೃಷ್ಣ, ಪ್ರಭುಸ್ವಾಮಿ, ಬಸವರಾಜಪ್ಪ ಇತರ ಗಣ್ಯರು ಶ್ರೀಗಳಿಗೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts