More

    ವನ್ಯಜೀವಿ ಮಂಡಳಿಗೆ ವಿಪ ಸದಸ್ಯ ಶಾಂತಾರಾಮ ಸಿದ್ದಿ ನೇಮಕ

    ಯಲ್ಲಾಪುರ: ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾಗಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಅವರನ್ನು ನೇಮಕ ಮಾಡಲಾಗಿದೆ. ಮುಖ್ಯಮಂತ್ರಿಗಳು ಅಧ್ಯಕ್ಷ, ಅರಣ್ಯ ಸಚಿವರು ಉಪಾಧ್ಯಕ್ಷರಾಗಿರುವ ಸಮಿತಿಯಲ್ಲಿ ರಾಜ್ಯದ ವಿವಿಧ ಎನ್​ಜಿಒಗಳ ಮುಖ್ಯಸ್ಥರು, ವನ್ಯಜೀವಿಶಾಸ್ತ್ರಜ್ಞರು ಸದಸ್ಯರಾಗಿದ್ದಾರೆ.

    ಈ ಕುರಿತು ‘ವಿಜಯವಾಣಿ’ ಗೆ ಪ್ರತಿಕ್ರಿಯಿಸಿರುವ ಶಾಂತಾರಾಮ ಸಿದ್ದಿ, ‘ಈ ಅವಕಾಶ ನೀಡಿದ್ದಕ್ಕಾಗಿ ಸರ್ಕಾರಕ್ಕೆ ಆಭಾರಿಯಾಗಿದ್ದೇನೆ. ಜಿಲ್ಲೆಗೆ ವಿವಿಧ ಯೋಜನೆಗಳು ಬರುವ ಸಂದರ್ಭದಲ್ಲಿ ವನ್ಯಜೀವಿ ಮಂಡಳಿ, ಪರಿಸರ ಇಲಾಖೆಯ ಕಾರಣದಿಂದ ಸ್ಥಗಿತಗೊಳ್ಳುವ ವಿಚಾರವನ್ನು ಪದೇಪದೆ ಕೇಳುತ್ತಿದ್ದೆವು. ಈಗ ನಾನು ಆ ಮಂಡಳಿಯ ಸದಸ್ಯನಾಗುತ್ತಿರುವುದರಿಂದ ಆ ವಿಚಾರದಲ್ಲಿನ ಸತ್ಯಾಸತ್ಯತೆ ಕುರಿತು ಸ್ಪಷ್ಟವಾದ ಮಾಹಿತಿ ಸಿಗಲಿದೆ. ಜತೆಗೆ ಮಂಡಳಿಯಿಂದ ಜಿಲ್ಲೆಗೆ ದೊರೆಯಬಹುದಾದ ಎಲ್ಲ ಸೌಲಭ್ಯಗಳನ್ನು ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts