More

    ಪೊಲೀಸರಂತೆ ನಟಿಸಿ ಚಿನ್ನಾಭರಣ ವಂಚನೆ

    ಶಿವಮೊಗ್ಗ: ನಗರದ ಜೈಲ್ ವೃತ್ತದ ಬಳಿ ಪೊಲೀಸ್ ಅಧಿಕಾರಿಗಳಂತೆ ನಟಿಸಿ ವಂಚಕರಿಬ್ಬರು ಮಹಿಳೆಯೊಬ್ಬರ 2.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.

    ಹೊಸಮನೆ ಬಡಾವಣೆಯ ಶಂಕರಮ್ಮ ಚಿನ್ನಾಭರಣ ಕಳೆದುಕೊಂಡವರು. ಶಂಕರಮ್ಮ ಅವರು ಅಂಚೆ ಕಚೇರಿಗೆ ತೆರಳುತ್ತಿದ್ದಾಗ ಪೊಲೀಸ್ ಅಧಿಕಾರಿ ಎಂದು ನಂಬಿಸಿ ಚಿನ್ನಾಭರಣ ಪಡೆದು ವಂಚಿಸಲಾಗಿದೆ. ಜೈಲ್ ವೃತ್ತದ ಬಳಿ ಶಂಕರಮ್ಮ ಅವರನ್ನು ತಡೆದ ವಂಚಕ, ರವಿ ಸರ್ ಕರೆಯುತ್ತಿದ್ದಾರೆಂದು ಅವರನ್ನು ಕರೆದೊಯ್ದಿದ್ದ. ಅಲ್ಲಿದ್ದ ಮತ್ತೊಬ್ಬ ಬೆಳಗ್ಗೆ ಯುವತಿಯೊಬ್ಬಳಿಗೆ ಚಾಕು ತೋರಿಸಿ ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ಅದರ ತನಿಖೆ ನಡೆಸುತ್ತಿದ್ದೇವೆಂದು ನಂಬಿಸಿದ್ದರು.
    ಶಂಕರಮ್ಮ ಅವರ ಬಂಗಾರದ ಸರ, ಉಂಗುರಗಳನ್ನು ಬಿಚ್ಚಿಸಿ ಪೇಪರ್ ಕವರ್‌ನಲ್ಲಿ ಹಾಕುವಂತೆ ತಿಳಿಸಿದ್ದರು. ಬಳಿಕ ಆ ಕವರನ್ನು ಶಂಕರಮ್ಮ ಅವರ ಬ್ಯಾಗ್‌ನಲ್ಲಿರಿಸಿದ್ದರು. ಅಲ್ಲಿಂದ ಸ್ವಲ್ಪ ದೂರ ತೆರಳಿದ್ದ ಶಂಕರಮ್ಮ ಅವರು ಬ್ಯಾಗ್‌ನಲ್ಲಿದ್ದ ಪೇಪರ್ ಕವರ್ ತೆಗೆದಾಗ ಆಘಾತ ಕಾದಿತ್ತು. ಪೇಪರ್ ಕವರ್‌ನಲ್ಲಿ ಚಿನ್ನದ ಆಭರಣಗಳು ಇರಲಿಲ್ಲ. ಜೈಲ್ ಸರ್ಕಲ್ ಬಳಿ ಬಂದಾಗ ವಂಚಕರು ಜಾಗ ಖಾಲಿ ಮಾಡಿದ್ದರು. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts