More

    ರಸ್ತೆ ಕೋಡಿ ಒಡೆದು ಗದ್ದೆಗೆ ಹಾನಿ

    ಸಿದ್ದಾಪುರ: ತಾಲೂಕಿನ ವಾಜಗೋಡ ಗ್ರಾಪಂ ವ್ಯಾಪ್ತಿಯ ಐಸೂರಿನಲ್ಲಿ ರಸ್ತೆಯ ಕೋಡಿ ಒಡೆದು ವೆಂಕಟ್ರಮಣ ತಿಮ್ಮ ನಾಯ್ಕ ಐಸೂರು ಅವರ ಒಂದೂವರೆ ಎಕರೆ ಭತ್ತದ ಕ್ಷೇತ್ರ ಮಣ್ಣಿನಲ್ಲಿ ಹೂತು ಹೋಗಿದೆ.

    ಕಳೆದ ಒಂದು ವಾರದ ಹಿಂದೆ ಸುರಿದ ಮಳೆಗೆ ವಂದಾನೆ-ಐಸೂರು ರಸ್ತೆಯ ಐಸೂರಿನಲ್ಲಿ ರಸ್ತೆ ಕೋಡಿ ಒಡೆದು ಈ ಘಟನೆ ನಡೆದಿದೆ. ಸಿದ್ದಾಪುರ ಲೋಕೋಪಯೋಗಿ ಇಲಾಖೆ ಈ ರಸ್ತೆ ನಿರ್ವಹಣೆ ಮಾಡುತ್ತಿದ್ದು, ಹಾನಿಯಾದ ರೈತರಿಗೆ ಇಲಾಖೆಯಿಂದ ಸೂಕ್ತ ಪರಿಹಾರ ನೀಡುವಂತೆ ವಾಜಗೋಡ ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ನಾಯ್ಕ ಐಸೂರು ಆಗ್ರಹಿಸಿದ್ದಾರೆ.

    ವಂದಾನೆ-ಐಸೂರು ರಸ್ತೆಯ ಐಸೂರಿನಲ್ಲಿ ಕೋಡಿ ಒಡೆದಿರುವ ಸ್ಥಳದಲ್ಲಿ ಕೂಡಲೆ ಕಾಂಕ್ರೀಟ್ ವಾಲ್ ನಿರ್ವಿುಸಲಾಗುವುದು. ಸೂಕ್ತ ಪರಿಹಾರಕ್ಕೆ ಹಾನಿಗೊಳಗಾದ ರೈತರು ಮನವಿ ನೀಡಿದರೆ ಅದನ್ನು ಸಂಬಂಧಪಟ್ಟ ಕೃಷಿ ಇಲಾಖೆಗೆ ದಾಖಲೆ ನೀಡಲಾಗುವುದು.

    | ಶೇಷಶಯನ, ಇಂಜಿನಿಯರ್ ಲೋಕೋಪಯೋಗಿ ಇಲಾಖೆ ಸಿದ್ದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts