More

    ರಸ್ತೆ ಕಾಮಗಾರಿಗೆ ಅನುದಾನ ಮಂಜೂರು

    ನಿಪ್ಪಾಣಿ: ತಾಲೂಕಿನ ಕೊಗನೋಳಿ&ಹಂಚಿನಾಳ ರಸ್ತೆ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ 4.95 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

    ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಅನುದಾನದ ಪ್ರತಿಯನ್ನು ಗ್ರಾಪಂ ಅಧ್ಯಕ್ಷ ಬಬಲ್​ ಹವಾಲ್ದಾರರಿಗೆ ಮಂಗಳವಾರ ಹಸ್ತಾಂತರಿಸಿ ಮಾತನಾಡಿದರು. ಕರೊನಾ ಮತ್ತು ಪ್ರವಾಹದಿಂದ ಹಂಚಿನಾಳ ಗ್ರಾಮದಿಂದ ಕೊಗನೋಳಿ ಗ್ರಾಮದವರೆಗಿನ 5 ಕಿ.ಮೀ. ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಹಿನ್ನಡೆಯಾಗಿತ್ತು. ಟೆಂಡರ್​ ಪ್ರಕ್ರಿಯೆ ಪೂರ್ಣಗೊಳಿಸಿ ಮುಂದಿನ ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.

    ಸಂಸದ ಅಣ್ಣಾಸಾಹೇಬ ಜೊಲ್ಲೆ, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ವೈ. ಹವಾಲ್ದಾರ್​, ಸುನೀಲ ಮಾನೆ, ಬಬಲು ಪಾಟೀಲ, ಕುಮಾರ ಗುರವ, ಮಧುಕರ ಚೌಗುಲೆ, ಸಿದ್ಧಗೊಂಡ ವಂದೂರೆ, ರಾವಸಾಹೇಬ ನಲವಡೆ, ಸುಶಾಂತ ವಂದೂರೆ, ಗಣೇಶ ಕೋಂಡೆಕರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts