ನಿಪ್ಪಾಣಿ: ತಾಲೂಕಿನ ಕೊಗನೋಳಿ&ಹಂಚಿನಾಳ ರಸ್ತೆ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ 4.95 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಅನುದಾನದ ಪ್ರತಿಯನ್ನು ಗ್ರಾಪಂ ಅಧ್ಯಕ್ಷ ಬಬಲ್ ಹವಾಲ್ದಾರರಿಗೆ ಮಂಗಳವಾರ ಹಸ್ತಾಂತರಿಸಿ ಮಾತನಾಡಿದರು. ಕರೊನಾ ಮತ್ತು ಪ್ರವಾಹದಿಂದ ಹಂಚಿನಾಳ ಗ್ರಾಮದಿಂದ ಕೊಗನೋಳಿ ಗ್ರಾಮದವರೆಗಿನ 5 ಕಿ.ಮೀ. ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಹಿನ್ನಡೆಯಾಗಿತ್ತು. ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಮುಂದಿನ ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ವೈ. ಹವಾಲ್ದಾರ್, ಸುನೀಲ ಮಾನೆ, ಬಬಲು ಪಾಟೀಲ, ಕುಮಾರ ಗುರವ, ಮಧುಕರ ಚೌಗುಲೆ, ಸಿದ್ಧಗೊಂಡ ವಂದೂರೆ, ರಾವಸಾಹೇಬ ನಲವಡೆ, ಸುಶಾಂತ ವಂದೂರೆ, ಗಣೇಶ ಕೋಂಡೆಕರ ಇತರರು ಇದ್ದರು.