More

    ಮರಳು ಬ್ಲಾಕ್ ಪರಿಶೀಲಿಸಿದ ಹಟ್ಟಿ ಚಿನ್ನದ ಗಣಿ ಎಂಡಿ

    ರಾಣೆಬೆನ್ನೂರ: ತಾಲೂಕಿನ ತುಂಗಭದ್ರಾ ನದಿಪಾತ್ರದ ವಿವಿಧ ಮರಳಿನ ಬ್ಲಾಕ್​ಗಳಿಗೆ ಹಟ್ಟಿ ಚಿನ್ನದ ಗಣಿ ವ್ಯವಸ್ಥಾಪಕ ನಿರ್ದೇಶಕಿ ಸಲ್ಮಾ ಕೆ. ಅವರು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

    ಚಂದಾಪುರ, ಹರನಗಿರಿ, ಬೇಲೂರು, ಉದಗಟ್ಟಿ, ಹಿಲದಹಳ್ಳಿ, ಹಿರೇಬಿದರಿ ಸೇರಿ ವಿವಿಧ ಬ್ಲಾಕ್​ಗಳಿಗೆ ಭೇಟಿ ನೀಡಿ ಮರಳಿನ ಗುಣಮಟ್ಟ ಹಾಗೂ ಎಷ್ಟು ಪ್ರಮಾಣದಲ್ಲಿ ಲಭ್ಯವಾಗಲಿದೆ ಎಂಬುದು ಸೇರಿ ಇತರ ಮಾಹಿತಿ ಪಡೆದುಕೊಂಡರು.

    ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ತಹಸೀಲ್ದಾರ್ ಬಸನಗೌಡ ಕೋಟೂರು, ಕಂದಾಯ ನಿರೀಕ್ಷಕ ವಾಗೀಶ ಮಳಿಮಠ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

    ಮರಳು ಬ್ಲಾಕ್​ಗಳನ್ನು ಹಟ್ಟಿ ಚಿನ್ನದ ಗಣಿಗೆ ವಹಿಸಲು ಸರ್ಕಾರ ಚಿಂತನೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆಗೆ ಆಗಮಿಸಿದ್ದಾರೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts