More

    ಬಿಜೆಪಿಗರಿಗೆ ತಲೆ ಕೆಟ್ಟಿದೆ

    ಯಾದಗಿರಿ:ಕಾಂಗ್ರೆಸ್ನಲ್ಲಿ ಲಿಂಗಾಯತರಿಗೆ ಕಡೆಗಣನೆ ಮಾಡಲಾಗುತ್ತಿದೆ ಎಂಬ ಶಾಸಕ ಶಾಮನೂರು ಶಿವಶಂಕರಪ್ಪ ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಪ್ರತಿಕ್ರಿಯಿಸಿದರು.

    ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಕಾಂಗ್ರೆಸ್ನಲ್ಲಿ 7 ಜನರಿಗೆ ಸಚಿವರನ್ನಾಗಿ ಮಾಡಲಾಗಿದೆ. ಅದು ಹೇಗೆ ಮೂಲೆಗುಂಪು ಅಂತ ಹೇಳಲು ಸಾಧ್ಯ. ಲಿಂಗಾಯತ ಅಧಿಕಾರಿಗಳಿಗೆ ಪೋಸ್ಟಿಂಗ್ ಸಿಗುತ್ತಿಲ್ಲ ಎಂಬ ಹೇಳಿಕೆಯ ಬಗ್ಗೆ ಐಎಎಸ್, ಐಪಿಎಸ್ ಅಧಿಕಾರಿಗಳ ಪಟ್ಟಿ ತೆಗೆದು ನೋಡಿದರೆ ಗೊತ್ತಾಗುತ್ತದೆ. ನಾವು ಕಾಂಗ್ರೆಸ್ನವರು, ನಮ್ಮ ಪಕ್ಷದ ಜತೆಗೆ ಇರುತ್ತೇವೆ. ಶಿವಶಂಕರಪ್ಪ ಅವರು ಯಾರ ಜತೆ ಬೇಕಾದರು ಸೇರಿ ಲಿಂಗಾಯತರು ಸಕರ್ಾರ ರಚನೆ ಮಾಡ್ತಿವಿ ಅಂತ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

    ಸಂಕ್ರಮಣ ಬಳಿಕ ಸಕರ್ಾರ ಪತನ ಆಗುತ್ತದೆ ಎಂಬ ಸಿಪಿ ಯೋಗೇಶ್ವರ ಹೇಳಿಕೆಗೆ ವ್ಯಂಗ್ಯವಾಡಿದ ದರ್ಶನಾಪುರ, ಬಿಜೆಪಿಗರಿಗೆ ಇನ್ನೂ ವಿಧಾನಸಭೆ ಚುನಾವಣೆ ಸೋಲನ್ನು ಇನ್ನೂ ಅರಗಿಸಿಕೊಳ್ಳಲು ಸಾಗುತ್ತಿಲ್ಲ. ಅವರಿಗೆ ತಲೆ ಕೆಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರ 56 ಇಂಚಿನ ಎದೆ ಇದ್ದರೂ ನಾವು ಹೇಗೆ ಸೋತ್ತಿದ್ದೇವೆ ಎಂಬ ಚಿಂತೆ ಆವರಿಸಿದೆ. ಬಿಜೆಪಿ ಮಾಜಿ ಮುಖ್ಯಮಂತ್ರಿ ಹೋದರೆ, ಅವರ ನಾಯಕರು ಭೇಟಿ ಆಗಿಲ್ಲ. ಅದೆ ಕುಮಾರಸ್ವಾಮಿ ಹೋದರೆ ರೆಡ್ ಕಾಪರ್ೆಟ್ ಹಾಕಿ ಸ್ವಾಗತಿಸಿದ್ದಾರೆ. ಇದರ ಮೇಲೆ ಕನರ್ಾಟಕ ಜನತೆ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಎಷ್ಟು ಭಯವಿದೆ ಅನ್ನೋದು ಗೊತ್ತಾಗುತ್ತದೆ. ಕನರ್ಾಟಕದ ಜನ ಕೇವಲ ಭಾಷಣ ಮಾಡಿದ್ರೆ ಓಟ್ ಹಾಕಲ್ಲ. ಕೆಲಸ ಮಾಡಿದರೆ ಮಾತ್ರ ಅಧಿಕಾರ ನೀಡುತ್ತಾರೆ ಎಂದು ಟಾಂಗ್ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts