More

    ಫೆ. 4ಕ್ಕೆ ಪಂಚ ಮಹಾಯಜ್ಞ, ಧರ್ಮ ಸಭೆ

    ದಾವಣಗೆರೆ: ಅಖಿಲ ಭಾರತೀಯ ಸಂತ ಸಮಿತಿಯ ವತಿಯಿಂದ ಹರಿಹರದ ಎಸ್‌ಜೆಯುಪಿ ಪಾಲಿಟೆಕ್ನಿಕ್ ಕಾಲೇಜು ಮೈದಾನದಲ್ಲಿ ಫೆ. 4 ರಂದು ಪಂಚ ಮಹಾಯಜ್ಞ ಮತ್ತು ಧರ್ಮ ಸಭೆ ಏರ್ಪಡಿಸಲಾಗಿದೆ ಎಂದು ಸಮಿತಿಯ ಪ್ರಾಂತ ಅಧ್ಯಕ್ಷ ಮಹಾಮಂಡಲೇಶ್ವರ ವಿದ್ಯಾನಂದ ಸರಸ್ವತಿ ಗುರೂಜಿ ತಿಳಿಸಿದರು.
    ಅಂದು ಬೆಳಗ್ಗೆ 6 ರಿಂದ ಪಂಚ ಮಹಾಯಜ್ಞ, ಮಧ್ಯಾಹ್ನ 12 ಗಂಟೆಗೆ ಧರ್ಮ ಸಭೆ ಆಯೋಜಿಸಲಾಗಿದೆ. ಲೋಕ ಕಲ್ಯಾಣಾರ್ಥ ಮಹಾಚಂಡಿಕಾ ಹೋಮ ಸಮೇತ ಚಕ್ರ ನವಾವರಣ ಹೋಮ, ಗಣಹೋಮ, ಮಹಾರುದ್ರ ಹೋಮ, ಶ್ರೀ ರಾಮತಾರಕ ಹೋಮ ನಡೆಯಲಿವೆ. ಎಲ್ಲರಿಗೂ ಮುಕ್ತವಾಗಿ ಭಾಗವಹಿಸುವ ಅವಕಾಶ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಭಗವತ್ಪಾದರು ಸಾನ್ನಿಧ್ಯ ವಹಿಸಲಿದ್ದು, ನಾಲ್ಕು ಜಿಲ್ಲೆಗಳಿಂದ 25 ಜನ ಸಾಧು ಸಂತರು ಹಾಗೂ ಗಣ್ಯರು ಧರ್ಮಸಭೆಯಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
    ಮಾತಾಶ್ರೀ ಶ್ರೀ ಶಿವ ಜ್ಞಾನಮಹಿ ಸರಸ್ವತಿ, ಡಾ.ಆರ್.ಆರ್.ಖಮಿತ್ಕರ್, ಹೊನ್ನಾಳಿ ಬಾಬಣ್ಣ, ರಾಜ್ಯ ಸಂಯೋಜಕ ವೀರೇಶ್ ಅಜ್ಜಣ್ಣನವರ್, ವಿಭಾಗ ಸಂಯೋಜಕ ಆರ್.ಎಲ್ ಯೋಗೇಶ್, ಅಂಬುಜಾ ರಾಜೊಳ್ಳಿ, ಪ್ರಮಿಳಾ ನಲ್ಲೂರು, ಪರಶುರಾಮ್, ನಿರಂಜನ್, ಗಣೇಶ್ ಸುದ್ದಿಗೋಷ್ಠಿಯಲ್ಲಿದ್ದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts