More

    ಪ್ರತಿಭಾ ಪುರಸ್ಕಾರ ಸಮಾರಂಭ ಜು. 5ರಂದು

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಕರ್ನಾಟಕ ರಾಜ್ಯ ಸ-ಅಭಿವೃದ್ಧಿ ಸಂಘದ ವತಿಯಿಂದ ಜು. 17ರಂದು ಬೆಳಗ್ಗೆ 10 ಗಂಟೆಗೆ ನಗರದ ಕರ್ನಾಟಕ ಆಲೂರು ಭವನದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸುಭಾಷ ನೇತ್ರೇಕರ ತಿಳಿಸಿದರು.
    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ, ಸಿಬಿಎಸ್‌ಸಿ 10ನೇ ವರ್ಗ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ. 75ರಷ್ಟು ಅಂಕ ಪಡೆದ ಶರಣ ಹರಳಯ್ಯ ಸಮಗಾರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುತ್ತಿದೆ ಎಂದರು.
    ಸಂಘದ ಜಂಟಿ ಕಾರ್ಯದರ್ಶಿ ಚಂದ್ರಕಾಂತ ಪೂಜಾರ ಅವರ ತಂದೆ-ತಾಯಿ ಸ್ಮರಣಾರ್ಥ ಈ ಪುರಸ್ಕಾರ ನೀಡಲಾಗುತ್ತಿದೆ. ಜು. 17ರಂದು ಏರ್ಪಡಿಸಿರುವ ಸಮಾರಂಭಕ್ಕೆ ಸಚಿವರು, ಶಾಸಕರು ಸೇರಿ ವಿವಿಧ ಕ್ಷೇತ್ರಗಳ ಗಣ್ಯರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.
    ಸಮಾಜದ ಆಸಕ್ತ ವಿದ್ಯಾರ್ಥಿಗಳು ಜು. 5ರೊಳಗೆ ಸಂಚಾಲಕ ಯಲ್ಲಪ್ಪ ಸಮಗಾರ ಅಥವಾ ನವಚೇತನ ಬುಕ್ ಹೌಸ್, ಗಜರಾಜ ಆರ್ಕೆಡ್, ಜಯನಗರ, ಧಾರವಾಡ ವಿಳಾಸದಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಸಂಘದ ಕಚೇರಿ ಸಂಪರ್ಕಿಸಬಹುದು ಎಂದರು.
    ಮಂಜುನಾಥ ಪೂಜಾರ, ಶಿವಕುಮಾರ ದೊಡಮನಿ, ಬಸವಂತಪ್ಪ ಸಣ್ಣಕ್ಕಿ, ಚಂದ್ರಕಾಂತ ಪೂಜಾರ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts