More

    ಪ್ರಜ್ವಲ್‌ ಪರವಾಗಿ ಅಖಾಡಕ್ಕಿಳಿದ ತಾಯಿ ಭವಾನಿ

    ಹಾಸನ: ಮಗನ ಪರವಾಗಿ ಅಖಾಡಕ್ಕಿಳಿದ ತಾಯಿ ಭವಾನಿ ರೇವಣ್ಣ, ಮಂಗಳವಾರ ನಗರದ ವಿವಿಧೆಡೆ ಪ್ರಚಾರ ನಡೆಸಿ ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್‌ನನ್ನು ಬೆಂಬಲಿಸುವಂತೆ ಮನವಿ ಮಾಡಿದರು.
    ನಗರದ ಜಿಲ್ಲಾ ವಕೀಲರ ಸಂಘದಲ್ಲಿ ಮಂಗಳವಾರ ಸಭೆ ನಡೆಸಿದ ಭವಾನಿ, ಮಗನ ಪರ ಮತಯಾಚಿಸಿದರು.ಭವಾನಿ ರೇವಣ್ಣ ಮಾತನಾಡಿ, ಹಾಸನದಿಂದ ಪ್ರಜ್ವಲ್‌ರೇವಣ್ಣ ಅಭ್ಯರ್ಥಿಯಾಗಿದ್ದಾರೆ. ಎಲ್ಲಾ ಕಡೆ ಚೆನ್ನಾಗಿದೆ ಅದರ ಬಗ್ಗೆ ಅನುಮಾನ ಇಲ್ಲ. ಪ್ರಜ್ವಲ್ ಕಳೆದ 5 ವರ್ಷದಿಂದ ಸಾಕಷ್ಟು ಅನುದಾನ ತಂದಿದ್ದಾರೆ. ಜೊತೆಗೆ ರೇವಣ್ಣ ಅವರು ಮಾಡಿರುವ ಕೆಲಸ ಕಣ್ಮುಂದೆ ನಿದರ್ಶನವಾಗಿವೆ. ಹಾಲಿ ಇರುವ ಕೋರ್ಟ್, ಬಸ್ ನಿಲ್ದಾಣ ಎಲ್ಲವೂ ರೇವಣ್ಣ ಅವರ ಕೊಡುಗೆ ಎಂದರು.
    ಕಳೆದ ವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ರೇವಣ್ಣ ಅವರಿಗೆ ಕರೆ ಮಾಡಿ ಮೈಸೂರು ಕಾರ್ಯಕ್ರಮಕ್ಕೆ ಕರೆಸಿಕೊಂಡಿದ್ದರು. ಹಾಸನ ಜಿಲ್ಲೆಗೆ 4500 ಕೋಟಿ ಗ್ರಾಂಟ್ ಕೊಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
    ಮೋದಿಜಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ದಿನ ನಿತ್ಯ ನೋಡುತ್ತಿದ್ದೇವೆ. ಮೋದಿಜಿ, ದೇವೇಗೌಡರನ್ನು ವಿಶ್ವಾಸ,ಗೌರವದಿಂದ ನಡೆಸಿಕೊಳ್ಳತ್ತಾರೆ. ಜನಗಳ ಆಶೀರ್ವಾದ ಬೇಡುತ್ತಾ ಮತ ಕೇಳುತ್ತಿದ್ದೇನೆ. ನನಗೆ ಸಾಧ್ಯವಾಗುವ ಕಡೆಗೆ ಹೋಗಿ ಮತಯಾಚನೆ ಮಾಡುವೆ ಎಂದರು.
    ಈ ವೇಳೆ ಸಂಸದ ಪ್ರಜ್ವಲ್, ಸ್ಥಳೀಯ ಶಾಸಕ ಎಚ್.ಪಿ.ಸ್ವರೂಪ್‌ಪ್ರಕಾಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಮೊದಲಾದವರು ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts