More

    ನೀರಿಗಾಗಿ ಗ್ರಾಪಂ ಕಚೇರಿಗೆ ಮುಳ್ಳು ಹಚ್ಚಿದ ಜನ !

    ಸೇಡಂ: ಗ್ರಾಮ ಪಂಚಾಯಿತಿ ಕಚೇರಿ ಬಾಗಿಲಿಗೆ ಮುಳ್ಳು ಹಚ್ಚುವ ಮೂಲಕ ಸಮರ್ಪಕ ಕುಡಿವ ನೀರು ಸರಬರಾಜು ಮಾಡದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬೆನಕನಹಳ್ಳಿ ಗ್ರಾಮದಲ್ಲಿ ಬುಧವಾರ ಜರುಗಿದೆ.

    ಬೆನಕನಹಳ್ಳಿ ಗ್ರಾಮದ ಕೆಲ ಬಡಾವಣೆಗಳಲ್ಲಿ ಸುಮಾರು 20 ದಿನಗಳಿಂದ ಕುಡಿವ ನೀರು ಸರಬರಾಜು ಆಗುತ್ತಿರಲಿಲ್ಲ. ಸಮಸ್ಯೆಗೆ ಸ್ಪಂದಿಸಬೇಕಾದ ಅಭಿವೃದ್ಧಿ ಅಧಿಕಾರಿ ತಿಂಗಳುಗಳಿಂದ ಕಚೇರಿಗೆ ಬಂದಿಲ್ಲ. ನಮ್ಮ ಸಮಸ್ಯೆ ಯಾರ ಮುಂದೆ ಹೇಳಬೇಕು ? ಚುನಾಯಿತ ಪ್ರತಿನಿಧಿಗಳಂತೂ ಸಂಬಂಧವಿಲ್ಲ ಎಂಬAತೆ ವರ್ತಿಸುತ್ತಿದ್ದಾರೆ. ನಾವೆಲ್ಲರೂ ಹನಿ ನೀರಿಗಾಗಿಯೂ ಪರದಾಟ ನಡೆಸುತ್ತಿದ್ದೇವೆ ಎಂದು ಜನರು ಕಿಡಿಕಾರಿದ್ದಾರೆ.

    ಬುಧವಾರ ನಸುಕಿನ ಜಾವ ಕಚೇರಿ ಬಾಗಿಲಿಗೆ ಮುಳ್ಳು ಹಚ್ಚಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿದ್ದಂತೆ ಗ್ರಾಪಂ ಸಿಬ್ಬಂದಿ ಕಚೇರಿಗೆ ಬಂದು, ಮುಳ್ಳು ತೆರವು ಮಾಡಿದ್ದಾರೆ. ಅಲ್ಲದೆ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದು, ಬೋರ್‌ವೆಲ್ ರಿಪೇರಿ ಮಾಡಿ ಬಡಾವಣೆಗೆ ನೀರು ಸರಬರಾಜು ಮಾಡಲು ಕ್ರಮಕೈಗೊಂಡಿದ್ದಾರೆ.

    ಮುಳ್ಳು ಹಚ್ಚಿರುವುದು ಯಾರೆಂಬುದು ಗೊತ್ತಾಗಿಲ್ಲ, ಆದರೆ ಕಳೆದ 20 ದಿನಗಳಿಂದ ಸಮಸ್ಯೆ ಅನುಭವಿಸುತ್ತಿದ್ದ ಜನರಿಗೆ ಒಂದೇ ದಿನದಲ್ಲಿ ಪರಿಹಾರ ಸಿಕ್ಕಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts