More

    ನಗರಗಳಿಗಷ್ಟೆ ಅನುದಾನ ಸೀಮಿತ

    ನವಲಗುಂದ: ಕರೊನಾ ಹಿನ್ನೆಲೆಯಲ್ಲಿ ಸರ್ಕಾರ ಜಿಲ್ಲೆಗೆ ಸಾಕಷ್ಟು ಹಣ ಬಿಡುಗಡೆಗೊಳಿಸಿದೆ. ಆದರೆ, ಅದನ್ನು ನಗರಗಳಿಗಷ್ಟೇ ಸೀಮಿತಗೊಳಿಸಲಾಗಿದೆ. ಹಳ್ಳಿಗರನ್ನು ಕಡೆಗಣಿಸಿದ್ದಾರೆ ಎಂದು ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಆರೋಪಿಸಿದರು.

    ಜಿಪಂ, ತಾಪಂ ಅನುದಾನ ಸಮರ್ಪಕವಾಗಿ ಸದ್ಬಳಕೆಯಾಗದಿರುವ ಕುರಿತು ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಅಧ್ಯಕ್ಷತೆಯಲ್ಲಿ ನವಲಗುಂದ ತಾಪಂನಲ್ಲಿ ಬುಧವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಯಾವುದೇ ಕಾರಣಕ್ಕೂ ಅನುದಾನ ವಾಪಸ್ ಹೋಗಲು ಬಿಡಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಕರೊನಾ ಹಿನ್ನೆಲೆಯಲ್ಲಿ ಜಿಲ್ಲೆಗೆ ಎಷ್ಟು ಹಣ ಬಿಡುಗಡೆಯಾಗಿದೆ? ಯಾವ್ಯಾವ ಯೋಜನೆಗಳನ್ನು, ಎಲ್ಲೆಲ್ಲಿ ಹಮ್ಮಿಕೊಳ್ಳಲಾಗಿದೆ ಎಂಬುದನ್ನು ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ. ಕರೊನಾ ರಾಜ್ಯಾದ್ಯಂತ ಹರಡುತ್ತಿದ್ದು, ಹಳ್ಳಿಗರಲ್ಲಿ ಭೀತಿ ಹೆಚ್ಚಾಗುತ್ತದೆ. ಗ್ರಾಮಗಳಿಗೆ ಬಸ್ ಸಂಚಾರ ಕೈಗೊಳ್ಳಬಾರದು ಎಂದು ತಾಪಂ ಸದಸ್ಯರು ಸರ್ಕಾರಕ್ಕೆ ಆಗ್ರಹಿಸಿದರು. ರೇಣುಕಾ ಇಬ್ರಾಹಿಂಪೂರ, ಅನ್ನಪೂರ್ಣಾ ಶಿರಹಟ್ಟಿಮಠ, ಕಲ್ಲಪ್ಪ ಹುಬ್ಬಳ್ಳಿ, ದೇವಪ್ಪ ರೋಣದ, ಬಸವರಾಜ ನರಗುಂದ, ಯೋಗಪ್ಪ ಗೋಲನಾಯ್ಕರ, ಪವಿತ್ರಾ ಪಾಟೀಲ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts