More

    ಧಾರ್ಮಿಕತೆಯಿಂದ ಉತ್ತಮ ಸಮಾಜ ಸಾಧ್ಯ

    ಕೆಂಭಾವಿ: ಪ್ರತಿಯೊಬ್ಬರಲ್ಲಿ ಧಾರ್ಮಿಕ ನಂಬಿಕೆ ಇದ್ದಾಗ ಮಾತ್ರ ಉತ್ತಮ ಸಮಾಜ ನಿಮರ್ಾಣ ಮಾಡಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಂಕ್ರಣ್ಣ ವಣಿಕ್ಯಾಳ ಹೇಳಿದರು.

    ಕಿರದಳ್ಳಿ ಗ್ರಾಮದ ಅಂಬಾಭವಾನಿ ದೇವಸ್ಥಾನದಲ್ಲಿ ಗುರುವಾರ ಗಣಹೋಮದ ಸಮಾರೋಪದಲ್ಲಿ ಮಾತನಾಡಿದ ಅವರು, ಇಂದಿನ ವೈಜ್ಞಾನಿಕ ಯುಗದಲ್ಲಿ ಉತ್ತಮ ಸಂಸ್ಕಾರ, ದೇವರ ಮೇಲೆ ಭಕ್ತಿ, ಶ್ರದ್ಧೆ ಸೇರಿ ವಿವಿಧ ಧಾಮರ್ಿಕ ನಂಬಿಕೆ ಇರಬೇಕು ಎಂದು ಕಿವಿ ಮಾತು ಹೇಳಿದರು.

    ಈ ಭಾಗದಲ್ಲಿ ವೇದ, ಮಂತ್ರ, ಪುರಾಣ, ಪ್ರವಚನ ಸೇರಿ ಹಲವು ಧಾರ್ಮಿಕ ಚಟುವಟಿಕೆಗಳನ್ನು ಜನರಿಗೆ ತಲುಪುವಂತೆ ಮಾಡುತ್ತಿರುವ ಕೂಡಲಗಿ ಬಾಬಾ ಮಹಾರಾಜ ಮಠದ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಹೇಳಿದರು.

    ಸರ್ವೋತ್ತಮಾಚಾರ್ಯ ಜೋಶಿ ಹೋಮಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಹೋಮಗಳ ಪೂಣರ್ಾಹುತಿ, ಸತ್ಯನಾರಾಯಣ ಪೂಜೆ, ದೇವಿಗೆ ವಿಶೇಷ ಪೂಜೆ, ಅಲಂಕಾರ, ಭಜನೆ, ಪ್ರಸಾದ ನಡೆಯಿತು.

    ದೇವಿ ಆರಾಧಕ ಅಮೀನರೆಡ್ಡಿ ಬಿರಾದಾರ, ಕೂಡಲಗಿ ಬಾಬಾ ಮಹಾರಾ ಮಠದ ಶ್ರೀ ಗಜಾನನ ಮಹಾರಾಜ ನೇತೃತ್ವದಲ್ಲಿ 10 ಜನ ಋತ್ವಿಜರು ವಿವಿಧ ಧಾರ್ಮಿಕ ಕಾರ್ಯ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts