More

    ದೇಶದ ಚಿಂತನೆ ವಾಡುವ ಪಕ್ಷ ಬಿಜೆಪಿ, ಜನಾಶೀರ್ವಾದ ಯಾತ್ರೆಯಲ್ಲಿ ಸಚಿವ ಎ.ನಾರಾಯಣಸ್ವಾಮಿ ಹೇಳಿಕೆ

    ಆನೇಕಲ್: ಬಿಜೆಪಿ ದೇಶದ ಬಗ್ಗೆ ಚಿಂತಿಸುವ ಏಕೈಕ ಪಕ್ಷ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

    ಅತ್ತಿಬೆಲೆ ಮಂಡಲ ವತಿಯಿಂದ ಭಾನುವಾರ ಆಯೋಜಿಸಿದ್ದ ಜನಾಶೀರ್ವಾದ ಯಾತ್ರೆಯ ಬಳಿಕ ವಾತನಾಡಿದ ಅವರು, ಕಾಂಗ್ರೆಸ್ ಈ ದೇಶದಲ್ಲಿ ಯಾವ ರೀತಿ ಆಡಳಿತ ನಡೆಸಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. 60 ವರ್ಷ ಅವರ ಆಡಳಿತ ವೈಖರಿಯಿಂದಾಗಿ ಹಾಗೂ ಕರೊನಾ ಸಂಕಷ್ಟದಿಂದ ಬೆಲೆ ಏರಿಕೆ ಆಗಿದೆಯೇ ಹೊರತು ಬಿಜೆಪಿಯಿಂದ ಅಲ್ಲ, ಅಧಿಕಾರ ಸಿಕ್ಕಾಗ ನಾವು ಜನಪರ ಯೋಜನೆಗಳನ್ನು ಜಾರಿಗೆ ತರಬೇಕು, ಜನ ನಮಗೆ ಅಧಿಕಾರ ನೀಡುವುದು ಸ್ಥಳೀಯವಾಗಿ ಮೂಲಸೌಕರ್ಯಗಳನ್ನು ಕಲ್ಪಿಸಲಿ ಎನ್ನುವ ಕಾರಣಕ್ಕೆ. ಆದರೆ ಕೆಲವರು ಅಧಿಕಾರ ಸಿಕ್ಕಾಗ ಅದರ ಅಮಲಿನಲ್ಲಿ ತೇಲುತ್ತಾರೆ. ಜನ ಅವರಿಗೆ ಬುದ್ದಿ ಕಲಿಸುವಂತಾಗುತ್ತದೆ ಎಂದರು.

    ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಲ್ಲೇ ಇದ್ದು ಬೇರೆ ಪಕ್ಷದ ಜೊತೆ ಕೈಜೋಡಿಸಿ ಕೆಲಸ ವಾಡಿದವರನ್ನು ನಾನು ಎಂದೂ ಸಹಿಸುವುದಿಲ್ಲ, ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣರಾದವರನ್ನು ಕ್ಷಮಿಸುತ್ತೇನೆ. ಆದರೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸೋಲಿಗೆ ಯಾರು ಕೆಲಸ ವಾಡುತ್ತಾರೋ ಅವರನ್ನು ಯಾರೂ ಕ್ಷಮಿಸುವ ವಾತೇ ಇಲ್ಲ ಎಂದು ಹೇಳುವ ಮೂಲಕ ವೇದಿಕೆಯಲ್ಲಿ ಹಾಜರಿದ್ದ ಕೆಲವು ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಕಿವಿವಾತು ಹೇಳಿದರು.

    ನರೇಂದ್ರ ಮೋದಿ ಸರ್ಕಾರದಲ್ಲಿ ವಾತ್ರ ಭ್ರಷ್ಟಾಚಾರರಹಿತ ಆಡಳಿತ ನಡೆಯುತ್ತಿದೆ. ಈ ಹಿಂದೆ ದೇಶವನ್ನು ಆಳಿದವರು ಎಷ್ಟು ಲೂಟಿ ಹೊಡೆದಿದ್ದಾರೆ ಎನ್ನುವ ವಾಹಿತಿ ಜನರಿಗೂ ಇದೆ, ಈ ನಿಟ್ಟಿನಲ್ಲಿ ಇದೆಲ್ಲವನ್ನು ಅರಿತು ಸುಭದ್ರ ದೇಶ ಕಟ್ಟಬೇಕಾದರೆ ಬಿಜೆಪಿಯಿಂದ ವಾತ್ರ ಸಾಧ್ಯ ಎಂದರು.

    ಆನೇಕಲ್ ತಾಲೂಕಿಗೆ ಶಿಂಷಾ ನದಿ ನೀರು ತರುವ ಬಗ್ಗೆ ನಾನೇ ಹೇಳಿದ್ದೆ, ಈ ಕುರಿತು ಕೆಲ ಕಾಂಗ್ರೆಸ್ಸಿಗರು ವಾತನಾಡಿರುವುದು ಕಿವಿಗೆ ಬಿದ್ದಿದೆ, ನನ್ನ ಅನಿಸಿಕೆ ಹೇಳಿಕೊಳ್ಳುವುದು, ಕಾರ್ಯಕ್ರಮಗಳನ್ನು ರೂಪಿಸುವುದು ನನಗೆ ಬಿಟ್ಟ ವಿಚಾರ. ಅಂತಹ ವಿಚಾರದಲ್ಲಿ ಮೂಗು ತೂರಿಸಲು ಅವರ‌್ಯಾರು? ಎಂದು ಪ್ರಶ್ನಿಸುವ ಮೂಲಕ ಸಂಸದ ಡಿ.ಕೆ.ಸುರೇಶ್‌ಗೆ ತಿರುಗೇಟು ನೀಡಿದರು.

    ಬಿಜೆಪಿ ತಾಲೂಕು ಟಕದ ವಾಜಿ ಅಧ್ಯಕ್ಷ ಎನ್.ಬಸವರಾಜು ವಾತನಾಡಿ, ಆನೇಕಲ್ ತಾಲೂಕು ಎಂದಿಗೂ ಬಿಜೆಪಿ ಭದ್ರಕೋಟೆ, ತಾಲೂಕಿನಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರು ಸಾಕಷ್ಟು ಜನ ಇದ್ದು ಅವರೆಲ್ಲರನ್ನೂ ಸ್ಮರಿಸಿಕೊಳ್ಳಬೇಕು, ಆನೇಕಲ್ಲಿನಲ್ಲಿ ನಾಲ್ಕು ಬಾರಿ ಶಾಸಕರಾಗಿ ಸೋತ ಬಳಿಕ ಚಿತ್ರದುರ್ಗ ಲೋಕಸಭಾ ಸಂಸದರಾಗಿ, ಕೇಂದ್ರ ಸಚಿವರಾಗಿರುವ ನಾರಾಯಣಸ್ವಾಮಿ ಅವರು ರೂಢಿಸಿಕೊಂಡ ಸರಳತೆ, ಪಕ್ಷ ಸಿದ್ಧಾಂತದಿಂದಾಗಿ ಕೇಂದ್ರದಲ್ಲಿ ಉನ್ನತ ಸ್ಥಾನ ಕಲ್ಪಿಸಿಕೊಂಡಿದ್ದಾರೆ, ಇಂತಹ ಹುದ್ದೆಗಳನ್ನು ಪಡೆಯಲು ಬಿಜೆಪಿಯಲ್ಲಿರುವ ಕಾರ್ಯಕರ್ತರು ಹಾಗೂ ಮುಖಂಡರಿಗೆ ವಾತ್ರ ಸಾಧ್ಯ ಎಂದರು.

    ಅತ್ತಿಬೆಲೆ ವತ್ತದಿಂದ ಬಿದರಗುಪ್ಪೆಯವರೆಗೆ ಮೆರವಣಿಗೆ ನಡೆಸಿ ಅಭಿನಂದನಾ ಸವಾರಂಭದಲ್ಲಿ ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

    ಅತ್ತಿಬೆಲೆ ಬಿಜೆಪಿ ಮಂಡಲ ಅಧ್ಯಕ್ಷರಾದ ಎಸ್‌ಆರ್‌ಟಿ ಅಶೋಕ್, ಎನ್.ಶಂಕರ್, ಬಿದರಗುಪ್ಪೆ ಗ್ರಾಪಂಅಧ್ಯಕ್ಷ ರಾಜೇಶ್, ಅತ್ತಿಬೆಲೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ್ ರೆಡ್ಡಿ, ಬೆಂಗಳೂರು ನಗರ ಜಿಪಂ ವಾಜಿ ಅಧ್ಯಕ್ಷ ಕೆ ಸಿ ರಾಮಚಂದ್ರ, ಬಿಜೆಪಿ ಮುಖಂಡರಾದ ಹುಲ್ಲಳ್ಳಿ ಶ್ರೀನಿವಾಸ್, ಪಟಾಪಟ್ ಶ್ರೀನಿವಾಸ್, ಚಿತ್ತಗಾನಹಳ್ಳಿ ಹರೀಶ್, ಗಣೇಶ್, ಮುರಳಿಮೋಹನ್, ನಾರಾಯಣಸ್ವಾಮಿ, ನಾಗರಾಜ ಸೋನಿ, ಸುಲೋಚನ, ಮುನಿರಾಜು ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts