More

    ತಾಯಿ, ಮಗ ಇಬ್ಬರೂ ಹೃದಯಾಘಾತದಿಂದ ಸಾವು


    ಎಚ್.ಡಿ.ಕೋಟೆ: ತಾಯಿ ಪಾರ್ಶ್ವವಾಯುಗೀಡಾದ ಸುದ್ದಿ ಕೇಳಿ ಮಗ ಹೃದಯಾಘಾತದಿಂದ ಮೃತಪಟ್ಟರೆ, ಮಗ ಸತ್ತ ಸುದ್ದಿ ಕೇಳಿ ತಾಯಿಯೂ ಹೃದಯಾಘಾತದಿಂದ ಸಾವಿಗೀಡಾದರು.


    ಪಟ್ಟಣದ ಸಿದ್ದಪ್ಪಾಜಿ ರಸ್ತೆ ನಿವಾಸಿ ಗೋಪಾಲಯ್ಯ ಅವರ ಪತ್ನಿ ಸಣ್ಣಮಂಚಮ್ಮ(58), ಇವರ ಪುತ್ರ ಕೃಷ್ಣ (45) ಮೃತರು.


    ಎಚ್.ಡಿ. ಕೋಟೆ ಪಟ್ಟಣದ ಸೇಂಟ್ ಮೇರಿಸ್ ಆಸ್ಪತ್ರೆ ಮುಂಭಾಗ ಕೃಷ್ಣ ಅವರು ಟೀ ಅಂಗಡಿ ನಡೆಸುತ್ತಿದ್ದರು. ಜತೆಗೆ ಆಟೋಚಾಲಕರೂ ಆಗಿದ್ದರು. ಕೃಷ್ಣ ಅವರ ತಾಯಿ ಸಣ್ಣಮಂಚಮ್ಮ ಭಾನುವಾರ ಪಾರ್ಶ್ವವಾಯುಗೆ ತುತ್ತಾಗಿದ್ದರು. ಸಂಬಂಧಿಕರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಅವರನ್ನು ದಾಖಲು ಮಾಡಿ, ಈ ವಿಚಾರವನ್ನು ಮಗನಿಗೆ ತಿಳಿಸಿದ್ದಾರೆ. ವಿಚಾರ ಕೇಳಿದ ಕೃಷ್ಣ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಕುಸಿದು ಬಿದ್ದರು. ತಕ್ಷಣಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಅಷ್ಟರಲ್ಲಿ ಮೃತಪಟ್ಟಿದ್ದರು. ಮಗ ಮೃತಪಟ್ಟ ವಿಷಯವನ್ನು ತಾಯಿಗೆ ತಿಳಿಸಿದಾಗ ಅವರು ಹೃದಯಾಘಾತಕ್ಕೆ ಒಳಗಾಗಿ ನಿಧನರಾದರು.\


    ಮೃತ ಕೃಷ್ಣನಿಗೆ ಪತ್ನಿ, ಪುತ್ರಿ, ಪುತ್ರ ಇದ್ದಾರೆ. ತಾಯಿ, ಮಗ ಮೃತಪಟ್ಟ ವಿಚಾರ ತಿಳಿದುಪಟ್ಟಣ ಸೇರಿದಂತೆ ಅಕ್ಕಪಕ್ಕದ ಗ್ರಾಮದವರು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ಮೃತರ ಅಂತ್ಯಕ್ರಿಯೆ ಸೋಮವಾರ ಪಟ್ಟಣದ ರುದ್ರಭೂಮಿಯಲ್ಲಿ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts