ಹಳಿಯಾಳ: ತಬ್ಲಿಘಿ ಜಮಾತ್ ದೇಶಕ್ಕೆ ಮಾರಕವಾಗಿದ್ದು, ಇದರ ಮೇಲೆ ಸರ್ಕಾರ ನಿಷೇಧ ಹೇರಬೇಕು. ಮುಂದಿನ ದಿನಗಳಲ್ಲಿ ದೇಶಕ್ಕಾಗಲಿರುವ ಹಾನಿ ತಡೆಯಬೇಕು. ಅದಕ್ಕಾಗಿ ಭಾರತೀಯ ಮುಸ್ಲಿಮರು ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಮಾಜಿ ಶಾಸಕ ಸುನೀಲ ಹೆಗಡೆ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಎಲ್ಲರಿಗೂ ಅವರವರ ಧರ್ಮ ಶ್ರೇಷ್ಠ, ಆದರೆ, ನಮ್ಮ ಧರ್ಮಗಳ ಆಚರಣೆಯಿಂದ ಇತರರಿಗೆ ತೊಂದರೆಯಾಗಬಾರದು. ಮಾನವೀಯತೆ ದೃಷ್ಟಿಯಿಂದ ಪ್ರಾರ್ಥನೆ ಆಚರಣೆಗಳನ್ನು ಮಾಡಬೇಕು. ಇದು ಮತಾಂಧತೆ ತೋರ್ಪಡಿಸುವ ಸಮಯವಲ್ಲ ಎಂದು ಹೇಳಿದ್ದಾರೆ. ಕರೊನಾ ಭೀತಿಯ ನಡುವೆಯೇ ನಿಜಾಮದ್ದೀನ್ನಲ್ಲಿ ತಬ್ಲಿಘಿ ಜಮಾತ್ನವರು ಸಮಾವೇಶ ನಡೆಸುವ ಮೂಲಕ ಸೋಂಕು ಇನ್ನಷ್ಟು ಜನರಿಗೆ ಹರಡಲು ಕಾರಣಿಕರ್ತರಾಗಿದ್ದಾರೆ. ಈ ತಬ್ಲಿಘಿಗಳು ಇಡೀ ಸಮಾಜವನ್ನು ಹಾಳು ಮಾಡುತ್ತಿದ್ದು, ದೇಶದಲ್ಲಿ ಭಯಾನಕ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ಭಾರತೀಯ ಮುಸ್ಲಿಂ ಸಮುದಾಯದವರೆಲ್ಲರೂ ಈ ತಬ್ಲಿಘಿ ಜೊತೆಯಲ್ಲಿ ಇಲ್ಲ. ದೆಹಲಿಯ ನಿಜಾಮದ್ದೀನ್ ತಬ್ಲಿಘಿ ಜಮಾತ್ ಆಯೋಜಿಸಿದ್ದ ಧಾರ್ವಿುಕ ಸಮಾವೇಶದಲ್ಲಿ ಭಾಗವಹಿಸಲು ಜಿಲ್ಲೆಯಿಂದ ಹೋಗಿದ್ದವರ ಹೆಸರನ್ನು ಜಿಲ್ಲಾಡಳಿತ ಬಹಿರಂಗಪಡಿಸಬೇಕು. ಆ ಮೂಲಕ ಇತರರು ಅವರಿಂದ ಅಂತರ ಕಾಯ್ದು ಕೊಳ್ಳುವಂತೆ ಜಾಗೃತಗೊಳಿಸಬೇಕು. ದೆಹಲಿಗೆ ಹೋಗಿ ಬಂದವರು ಸ್ವಯಂ ಪ್ರೇರಿತರಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.