More

    ತಬ್ಲಿಘಿ ಜಮಾತ್ ನಿಷೇಧವಾಗಲಿ

    ಹಳಿಯಾಳ: ತಬ್ಲಿಘಿ ಜಮಾತ್ ದೇಶಕ್ಕೆ ಮಾರಕವಾಗಿದ್ದು, ಇದರ ಮೇಲೆ ಸರ್ಕಾರ ನಿಷೇಧ ಹೇರಬೇಕು. ಮುಂದಿನ ದಿನಗಳಲ್ಲಿ ದೇಶಕ್ಕಾಗಲಿರುವ ಹಾನಿ ತಡೆಯಬೇಕು. ಅದಕ್ಕಾಗಿ ಭಾರತೀಯ ಮುಸ್ಲಿಮರು ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಮಾಜಿ ಶಾಸಕ ಸುನೀಲ ಹೆಗಡೆ ಹೇಳಿದ್ದಾರೆ.

    ಈ ಕುರಿತು ಪ್ರಕಟಣೆ ನೀಡಿರುವ ಅವರು, ಎಲ್ಲರಿಗೂ ಅವರವರ ಧರ್ಮ ಶ್ರೇಷ್ಠ, ಆದರೆ, ನಮ್ಮ ಧರ್ಮಗಳ ಆಚರಣೆಯಿಂದ ಇತರರಿಗೆ ತೊಂದರೆಯಾಗಬಾರದು. ಮಾನವೀಯತೆ ದೃಷ್ಟಿಯಿಂದ ಪ್ರಾರ್ಥನೆ ಆಚರಣೆಗಳನ್ನು ಮಾಡಬೇಕು. ಇದು ಮತಾಂಧತೆ ತೋರ್ಪಡಿಸುವ ಸಮಯವಲ್ಲ ಎಂದು ಹೇಳಿದ್ದಾರೆ. ಕರೊನಾ ಭೀತಿಯ ನಡುವೆಯೇ ನಿಜಾಮದ್ದೀನ್​ನಲ್ಲಿ ತಬ್ಲಿಘಿ ಜಮಾತ್​ನವರು ಸಮಾವೇಶ ನಡೆಸುವ ಮೂಲಕ ಸೋಂಕು ಇನ್ನಷ್ಟು ಜನರಿಗೆ ಹರಡಲು ಕಾರಣಿಕರ್ತರಾಗಿದ್ದಾರೆ. ಈ ತಬ್ಲಿಘಿಗಳು ಇಡೀ ಸಮಾಜವನ್ನು ಹಾಳು ಮಾಡುತ್ತಿದ್ದು, ದೇಶದಲ್ಲಿ ಭಯಾನಕ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ಭಾರತೀಯ ಮುಸ್ಲಿಂ ಸಮುದಾಯದವರೆಲ್ಲರೂ ಈ ತಬ್ಲಿಘಿ ಜೊತೆಯಲ್ಲಿ ಇಲ್ಲ. ದೆಹಲಿಯ ನಿಜಾಮದ್ದೀನ್ ತಬ್ಲಿಘಿ ಜಮಾತ್ ಆಯೋಜಿಸಿದ್ದ ಧಾರ್ವಿುಕ ಸಮಾವೇಶದಲ್ಲಿ ಭಾಗವಹಿಸಲು ಜಿಲ್ಲೆಯಿಂದ ಹೋಗಿದ್ದವರ ಹೆಸರನ್ನು ಜಿಲ್ಲಾಡಳಿತ ಬಹಿರಂಗಪಡಿಸಬೇಕು. ಆ ಮೂಲಕ ಇತರರು ಅವರಿಂದ ಅಂತರ ಕಾಯ್ದು ಕೊಳ್ಳುವಂತೆ ಜಾಗೃತಗೊಳಿಸಬೇಕು. ದೆಹಲಿಗೆ ಹೋಗಿ ಬಂದವರು ಸ್ವಯಂ ಪ್ರೇರಿತರಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts