More

    ಡಯಾಲಿಸಿಸ್ ಸೆಂಟರ್ ಉದ್ಘಾಟನೆ

    ಕುಶಾಲನಗರ: ಲಯನ್ಸ್ 317ಡಿ ಹಾಗೂ ಕೆಎಂಟಿ ರಿನಾಲ್ ಕೇರ್ ಸಲ್ಯೂಷನ್ ಸಹಭಾಗಿತ್ವದೊಂದಿಗೆ ನಗರದ ಗಂಧದಕೋಟಿ ಬಳಿ ನಿರ್ಮಿಸಿರುವ ಡಯಾಲಿಸಿಸ್ ಸೆಂಟರ್ ಅನ್ನು ಬುಧವಾರ ಉದ್ಘಾಟಿಸಲಾಯಿತು.

    ಲಯನ್ಸ್ ಮಾಜಿ ಗೌರ್ವನರ್ ವಸಂತಕುಮಾರ್ ಶೆಟ್ಟಿ ಅವರು ಡಯಾಲಿಸಿಸ್ ಸೆಂಟರ್ ಉದ್ಘಾಟಿಸಿದರು. ಲಯನ್ಸ್ ಟ್ರಸ್ಟ್ ಮೂಲಕ ಲಯನ್ಸ್ ಜಿಲ್ಲೆಗೆ 11 ಯಂತ್ರಗಳನ್ನು ಈಗಾಗಲೆ ನೀಡಲಾಗಿದೆ. ಡಯಾಲಿಸಿಸ್‌ಗೆಂದು ಬರುವವರ ಸಮಯ ವ್ಯರ್ಥವಾಗದಂತೆ ಅನುಕೂಲ ಒದಗಿಸಲು ಕುಶಾಲನಗರದಲ್ಲಿ ಕೇಂದ್ರ ಆರಂಭಿಸಿದ್ದು 14 ಲಕ್ಷ ರೂ. ವೆಚ್ಚದಲ್ಲಿ ಎರಡು ಯಂತ್ರಗಳನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಕೆಎಂಟಿ ರಿನಾಲ್ ಕೇರ್ ಸಲ್ಯೂಷನ್ ಅಧ್ಯಕ್ಷ ಪೊನ್ನಚ್ಚನ ಮೋಹನ್ ಮಾತನಾಡಿ, ಡಯಾಲಿಸಿಸ್ ಸೆಂಟರ್ ಬಗ್ಗೆ ಮಾಹಿತಿ ಒದಗಿಸಿದರು. ದಾನಿಗಳ ಸಹಕಾರ ದೊರೆತಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಶೇ.50 ರಿಯಾಯಿತಿ ನೀಡಲು ಉದ್ದೇಶಿಸಲಾಗಿದೆ. ಪ್ರಸಕ್ತ ಕನಿಷ್ಠ ದರದಲ್ಲಿ ಈ ಚಿಕಿತ್ಸೆ ಒದಗಿಸಲಾಗುವುದು. ದೂರದ ಸ್ಥಳಗಳಿಗೆ ಚಿಕಿತ್ಸೆಗೆ ತೆರಳುತ್ತಿದ್ದ ಕುಶಾಲನಗರದಲ್ಲಿ ಇರುವ 50 ಕ್ಕೂ ಅಧಿಕ ಮಂದಿ ಇದರಿಂದ ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ ಎಂದರು.

    ಲಯನ್ಸ್ ಪ್ರಾಂತೀಯ ಅಧ್ಯಕ್ಷ ಅಂಬೇಕಲ್ ನವೀನ್, ಕುಶಾಲನಗರ ಲಯನ್ಸ್ ನೂತನ ಅಧ್ಯಕ್ಷ ಸುಮನ್ ಬಾಲಚಂದ್ರ, ಕಾರ್ಯದರ್ಶಿ ಟಿ.ಕೆ.ರಾಜಶೇಖರ್, ನಿತಿನ್ ಎನ್.ಗುಪ್ತ, ನಿಕಟಪೂರ್ವ ಅಧ್ಯಕ್ಷ ಎಂ.ಎಸ್.ಚಿಣ್ಣಪ್ಪ, ಖಜಾಂಚಿ ಹೇಮಂತ್, ಮಾಜಿ ಅಧ್ಯಕ್ಷ ಕೊಡಗನಹರ್ಷ, ಲಯನ್ಸ್ ಜಿಲ್ಲಾ ಪ್ರಮುಖ ಜಯರಾಂ ದೇರಪ್ಪಜ್ಜನ ಮನೆ, ಡಾ.ಪ್ರವೀಣ್, ಸತೀಶ್ ಕುಮಾರ್ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts