ಮುಳಬಾಗಿಲು: ನಗರದ ಅಮರಜ್ಯೋತಿ ವಿದ್ಯಾಸಂಸ್ಥೆಯ ಮುಂಭಾಗದ ಮೈದಾನದ ಹೆಲಿಪ್ಯಾಡ್ಗೆ ಮೇ10ರ ಬೆಳಗ್ಗೆ 10.30ಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಲಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಯುವ ಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗಮಿಸಲಿದ್ದು ಅವರನ್ನು ಸ್ವಾಗತಿಸಲು 6 ಸಾವಿರ ಬೈಕ್ಗಳಲ್ಲಿ 12ಸಾವಿರ ಯುವ ಕಾರ್ಯಕರ್ತರ ಪಡೆ, 6 ಸಾವಿರ ಮಹಿಳೆಯರು ಪೂರ್ಣಕುಂಭ ಸ್ವಾಗತದೊಂದಿಗೆ ವಿವಿಧ ಕಲಾ ತಂಡಗಳು ಮೆರವಣಿಗೆ ಮೂಲಕ ಸಮಾವೇಶದ ಸ್ಥಳ ತಲುಪಲಿದೆ ಎಂದು ಜೆಡಿಎಸ್ ಮುಖಂಡ ಸಮೃದ್ಧಿ ವಿ.ಮಂಜುನಾಥ್ ತಿಳಿಸಿದರು.
ನಗರದ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೆರವಣಿಗೆಯಲ್ಲಿ ತೆರಳುವಾಗ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್, ಮಾಜಿ ಸಚಿವ ದಿ.ಆಲಂಗೂರು ಶ್ರೀನಿವಾಸ್ ಪ್ರತಿಮೆಗೆ ಮಾಲಾರ್ಪಣೆ, ದರ್ಗಾ ಹಾಗೂ ಸೋಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ರಾ.ಹೆ 75ರ ಕೋಲಾರ ಬೈಪಾಸ್ನಲ್ಲಿರುವ ಬಾಲಾಜಿ ಭವನದ ಮುಂಭಾಗ ಜನತಾ ಜಲಧಾರೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.
ಕಾರ್ಯಕ್ರಮಕ್ಕೆ ಒಟ್ಟು 36 ಸಾವಿರ ಜನ ಸೇರಿಸುವ ಗುರಿ ಹೊಂದಲಾಗಿದೆ. ಗ್ರಾಮಾಂತರದಿಂದ ಆಗಮಿಸುವ ಕಾರ್ಯಕರ್ತರು ಮತ್ತು ಸಾರ್ವಜನಿಕರಿಗೆ 100 ಬಸ್ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಟೆಂಪೋ, ಟ್ರಾ$್ಯಕ್ಟರ್ ಮತ್ತಿತರ ವಾಹನಗಳ ಮೂಲಕ ಪಾಲ್ಗೊಳ್ಳಲಿದ್ದಾರೆ. ಮಜ್ಜಿಗೆ, ಊಟದ ವ್ಯವಸ್ಥೆಯನ್ನು 6 ಕೌಂಟರ್ಗಳಲ್ಲಿ 500 ಮಂದಿ ವಿತರಣಾ ಕಾರ್ಯದಲ್ಲಿ ತೊಡಗಲಿದ್ದಾರೆ ಎಂದರು.
ಕುರುಡುಮಲೆಯ ಕೌಂಡಿನ್ಯ ನದಿ ಹಾಗೂ ಕೋಲಾರ&ಮುಳಬಾಗಿಲು ತಾಲೂಕಿನ ಪಾಲಾರ್ ನದಿಯಿಂದ 500 ಬಿಂದಿಗೆಗಳಲ್ಲಿ ನೀರು ತಂದು 1 ಸಾವಿರ ಮಹಿಳೆಯರು ಕಳಶಗಳೊಂದಿಗೆ ಹಾಗೂ 500 ಕಲಾವಿದರ ನೃತ್ಯ ಪ್ರದರ್ಶನದೊಂದಿಗೆ, 6 ಸಾವಿರ ಜನತಾ ಜಲಧಾರೆ ಟೀ&ಶರ್ಟ್ ಹಾಕಿರುವ ಯುವಕರು ಬೈಕ್ ಮೂಲಕ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಕಾಡೇನಹಳ್ಳಿ ಕೆ.ಎನ್.ನಾಗರಾಜ್ ಮಾತನಾಡಿ, ಕೆಲವರು ಇಲ್ಲಸಲ್ಲದ ಊಹಾ ಪೋಹಗಳು ಹಬ್ಬಿಸುತ್ತಿದ್ದಾರೆ. 120 ೇತ್ರಗಳ ಜೆಡಿಎಸ್ ಅಭ್ಯರ್ಥಿಗಳನ್ನು ಈಗಾಗಲೇ ಪ್ರಕಟಿಸಿದ್ದು, ಸಮೃದ್ಧಿ ವಿ.ಮಂಜುನಾಥ್ ಮುಳಬಾಗಿಲು ಮೀಸಲು ೇತ್ರದ ಅಭ್ಯರ್ಥಿ ಎಂದು ೂಷಣೆ ಮಾಡಿದ್ದು ಅವರೇ ಮುಂದಿನ ಶಾಸಕರಾಗಲಿದ್ದಾರೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಶ್ರೀನಿವಾಸರೆಡ್ಡಿ, ಮಾಜಿ ಸದಸ್ಯ ಡಾ.ಸಿ.ಎನ್.ಪ್ರಕಾಶ್, ಜಿಪಂ ಮಾಜಿ ಸದಸ್ಯ ಬಿ.ವಿ.ಸಾಮೇಗೌಡ, ಜಂಟಿ ಕಾರ್ಯದರ್ಶಿ ಕವತನಹಳ್ಳಿ ಮುನಿಸ್ವಾಮಿಗೌಡ, ಜೆಡಿಎಸ್ ಮುಖಂಡರಾದ ದೊಮ್ಮಸಂದ್ರ ಡಿ.ವಿ.ರುಪತಿಗೌಡ, ಬೆಳಪನಹಳ್ಳಿ ಕೇಶವರೆಡ್ಡಿ, ಹರಪನಾಯಕನಹಳ್ಳಿ ರಮೇಶ್, ಬೊಮ್ಮಸಂದ್ರ ಪ್ರಹ್ಲಾದಗೌಡ ಇತರರಿದ್ದರು.
ಗೊಂದಲ ಸೃಷ್ಟಿಸಬೇಡಿ: ಜೆಡಿಎಸ್ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕಾರ್ಯಕ್ರಮ ಯಶಸ್ವಿಗೊಳಿಸಲು ಸಿದ್ದಗೊಂಡಿದ್ದಾರೆ. ತಾಲೂಕು ಮಾಜಿ ಅಧ್ಯಕ್ಷ ಆಲಂಗೂರು ಶಿವಣ್ಣ ಅವರು ಗಂಟಲು ಶಸ ಚಿಕಿತ್ಸೆಗೆ ಒಳಗಾಗಿದ್ದು ಅವರು ವಿಶ್ರಾಂತಿಯಲ್ಲಿದ್ದು ಮಂಗಳವಾರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ವೇದಿಕೆಗೆ ವಿಐಪಿ ಪಾಸ್ ಇರುವವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. 14 ವರ್ಷದಿಂದ ವನವಾಸ ಅನುಭವಿಸುತ್ತಿರುವ ಜೆಡಿಎಸ್ ಕಾರ್ಯಕರ್ತರು, ಮುಖಂಡರು 2023ರ ಚುನಾವಣೆಯಲ್ಲಿ ಜೆಡಿಎಸ್ ಬಹುಮತದಿಂದ ಗೆಲ್ಲಿಸಲು ಜನತಾ ಜಲಧಾರೆ ಕಾರ್ಯಕ್ರಮ ಹುರಿದುಂಬಿಸುತ್ತಿದೆ ಎಂದು ಮಂಜುನಾಥ್ ಹೇಳಿದರು.