More

    ಗುಡ್ನಾಪುರ ಕೆರೆಗೆ ಸಚಿವ ಹೆಬ್ಬಾರ ಬಾಗಿನ

    ಶಿರಸಿ: ವಾರದಿಂದ ಸುರಿಯುತ್ತಿರುವ ಮಳೆಯಿಂದ ಉಕ್ಕಿ ಹರಿಯುತ್ತಿರುವ ವರದಾ ನದಿ ಹಾಗೂ ಗುಡ್ನಾಪುರ ಕೆರೆಗೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು.

    ತಾಲೂಕಿನ ಬನವಾಸಿ ವ್ಯಾಪ್ತಿಗೆ ಒಳಪಡುವ ಎರಡೂ ನೀರಿನ ಮೂಲಗಳಲ್ಲಿ ನಿಗದಿತ ಮಟ್ಟಕ್ಕಿಂತ ಹೆಚ್ಚಿನ ನೀರು ಸಂಗ್ರಹಣೆಯಾಗಿದ್ದು, ಸಂಪ್ರದಾಯದಂತೆ ಸ್ಥಳಕ್ಕೆ ಭೇಟಿ ನೀಡಿ ಬಾಗಿನ ನೀಡಿದರು. ಗುಡ್ನಾಪುರದ ಬಂಗಾರೇಶ್ವರ ದೇವರು ಹಾಗೂ ವರದೆಗೆ ಪೂಜೆ ಸಲ್ಲಿಸಿ, ಕೃಷಿ ಸಮೃದ್ಧಿಗೆ ಬೇಡಿಕೊಂಡರು.

    ನಂತರ ಮಾತನಾಡಿದ ಸಚಿವ ಹೆಬ್ಬಾರ, ಕ್ಷೇತ್ರದ ಶಾಸಕನಾಗಿ, ಸಚಿವನಾಗಿ ವರದೆ ಮತ್ತು ಗುಡ್ನಾಪುರಕ್ಕೆ ಭೇಟಿ ನೀಡಿ ಬಾಗಿನ ಅರ್ಪಿಸಿ, ಶ್ರೇಯಸ್ಸಿಗೆ ಬೇಡಿಕೊಂಡಿದ್ದೇನೆ. ಈ ವರ್ಷ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮಳೆಯಾಗಿದೆ ಎಂದರು. ಮಳೆಯ ಕಾರಣ ಇಬ್ಬರ ಪ್ರಾಣ ಹಾನಿಯಾಗಿದೆ. ಅವರ ಕುಟುಂಬಕ್ಕೆ 5 ಲಕ್ಷ ರೂ. ನೀಡಲಾಗಿದ್ದು, ವಿವಿಧ ಹಾನಿಗಳಿಗೂ ಪರಿಹಾರ ನೀಡುವ ಕಾರ್ಯ ಸಾಗಿದೆ ಎಂದರು.

    ಜಿಲ್ಲೆಯಲ್ಲಿ ಮಳೆ ಇಳಿಕೆ
    ಕಾರವಾರ: ಜಿಲ್ಲೆಯಲ್ಲಿ ಮಳೆ ಇಳಿಕೆಯಾಗಿದೆ. ನೆರೆಯ ಪರಿಸ್ಥಿತಿ ಕೂಡ ನಿಯಂತ್ರಣಕ್ಕೆ ಬಂದಿದೆ. ಮಂಗಳವಾರ ಬೆಳಗಿನ ವರದಿಯಂತೆ ಅಂಕೋಲಾದಲ್ಲಿ 98.6, ಭಟ್ಕಳದಲ್ಲಿ 66.4, ಹಳಿಯಾಳದಲ್ಲಿ 4.8, ಹೊನ್ನಾವರದಲ್ಲಿ 114, ಕಾರವಾರದಲ್ಲಿ 64.2, ಕುಮಟಾದಲ್ಲಿ 147.1, ಮುಂಡಗೋಡಿನಲ್ಲಿ 16.2, ಸಿದ್ದಾಪುರದಲ್ಲಿ 51.2, ಶಿರಸಿಯಲ್ಲಿ 36, ಜೊಯಿಡಾದಲ್ಲಿ 31, ಯಲ್ಲಾಪುರದಲ್ಲಿ 45.5 ಮಿಮೀ ಮಳೆಯಾಗಿದೆ. ಕದ್ರಾ ಅಣೆಕಟ್ಟೆಗೆ 25661 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 18773 ಕ್ಯೂಸೆಕ್ ನೀರನ್ನು ವಿದ್ಯುತ್ ಉತ್ಪಾದನೆ ಮಾಡಿ ಬಿಡಲಾಗುತ್ತಿದೆ. ಗೇಟ್​ಗಳು ಬಂದ್ ಇವೆ. ಸೂಪಾ ಅಣೆಕಟ್ಟೆಗೆ 23974 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts