More

    ಕ್ಯಾಂಪಸ್ನಲ್ಲೇ ಪ್ರಾಚಾರ್ಯರ ಮೇಲೆ ಆ್ಯಸಿಡ್ ದಾಳಿಯತ್ನ

    ಕಲಬುರಗಿ: ಫಾರ್ಮಸಿ ಕಾಲೇಜಿನ ಪ್ರಾಚಾರ್ಯರ ಮೇಲೆ ಕ್ಯಾಂಪಸ್ನಲ್ಲೇ ಸಹಾಯಕ ಪ್ರಾಧ್ಯಾಪಕರೊಬ್ಬರು ದಾಳಿ ಮಾಡಿ ಆ್ಯಸಿಡ್ ಎರಚಲು ಯತ್ನಿಸಿದ ಘಟನೆ ನಗರದಲ್ಲಿ 21ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಸೇಡಂ ರಸ್ತೆಯಲ್ಲಿರುವ ಎಚ್ಕೆಇ ಕಾಲೇಜ್ ಆಫ್ ಫಾರ್ಮಸಿ ಪ್ರಾಚಾರ್ಯ ಡಾ.ಅರುಣಕುಮಾರ ಬೆಕನಾಳ ಎಂಬುವರ ಮೇಲೆ ದಾಳಿಗೆ ಯತ್ನಿಸಲಾಗಿದೆ. ಅದೇ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಶಾಂತವೀರ ಸಲಗಾರ ಈ ಕೃತ್ಯ ನಡೆಸಿದ್ದಾರೆ ಎಂದು ದೂರಲಾಗಿದೆ.

    ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾದಿಂದ ಫಾರ್ಮಸಿ ಕಾಲೇಜುಗಳ ಪರಿವೀಕ್ಷಣೆ ನಡೆಸಲು ರಚಿಸುವ ಸಮಿತಿಗೆ ಪರಿವೀಕ್ಷಕರನ್ನಾಗಿ (ಇನ್ಸ್ಪೆಕ್ಟರ್) ನೇಮಕ ಮಾಡುವ ವಿಷಯದಲ್ಲಿ ಉಂಟಾಗಿದ್ದ ಮನಸ್ತಾಪವೇ ಈ ದಾಳಿಗೆ ಕಾರಣ ಎನ್ನಲಾಗಿದೆ.

    ಕಾಲೇಜಿನಲ್ಲಿ ಶಾಂತವೀರ ಸಲಗಾರ ಮತ್ತು ವಿಶ್ವನಾಥ ಹುಲಿ ಎಂಬುವರು ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಕೌನ್ಸಿಲ್ ಪರಿವೀಕ್ಷಕರಾಗಿ ಬೋರ್ಡನಿಂದ ಕಲ್ಯಾಣಿ ಬಿರಾದಾರ ನೇಮಕಗೊಂಡಿದ್ದಾರೆ. ಆದರೆ ತನ್ನ ಹೆಸರು ಬಿಟ್ಟು ಬೇಕಂತಲೇ ಕಲ್ಯಾಣಿ ಅವರನ್ನು ಇನ್ಸ್ಪೆಕ್ಟರ್ ಆಗಿ ನೇಮಕ ಮಾಡಿದ್ದೀನಿ ಎಂದು ತಪ್ಪು ತಿಳಿದುಕೊಂಡು ಸಲಗಾರ ಈ ಕೃತ್ಯ ನಡೆಸಿದ್ದಾರೆ ಎಂದು ಡಾ.ಅರುಣಕುಮಾರ ದೂರಿದ್ದಾರೆ.

    ಕಾಲೇಜಿನ ಕ್ಯಾಂಪಸ್ನಲ್ಲಿ ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೆ ಚೇಂಬರ್ನಲ್ಲಿ ಕುಳಿತಾಗ ಹಾಜರಿ ಹಾಕುವುದಕ್ಕೆ ಥಂಬ್ ಒತ್ತಲು ಬಂದು ಜಗಳ ತೆಗೆದು ತನ್ನ ಜೇಬಿನಲ್ಲಿದ್ದ ಆ್ಯಸಿಡ್ ಬಾಟಲಿ ತೆಗೆದು ಮೈಮೇಲೆ ಚೆಲ್ಲಲು ಮುಂದಾದರು. ಆಗ ಅಲ್ಲಿದ್ದ ಸಿಬ್ಬಂದಿ ದೇವಿಕಾ, ಮಹಾನಂದಾ, ಸಿದ್ದಮ್ಮ ಮೊದಲಾದವರು ಬಿಡಿಸಿದ್ದು, ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಹೊರಗೋಡಿ ಬಂದೆ. ನಂತರ ನಾನು ಕೆಲಸ ಮುಗಿಸಿ ಮನೆಗೆ ಹೋಗುವಾಗ ಶಾಂತವೀರ ನನ್ನ ಮೇಲೆ ಕಾರು ಹರಿಸಿ ಕೊಲೆಗೆ ಯತ್ನಿಸಿದ್ದಾರೆ ಎಂದೂ ಅರುಣಕುಮಾರ ದೂರಿನಲ್ಲಿ ವಿವರಿಸಿದ್ದಾರೆ. ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts