More

    ಕೊಲ್ಲಿಪಾಕಿಯಲ್ಲಿ ಗುಂಡಕನಾಳಶ್ರೀಗಳ ಮೌನಾನುಷ್ಠಾನ

    ತಾಳಿಕೋಟೆ: ಯುಗವತಾರಿ ಯುಗಪುರುಷರ ಜನ್ಮಭೂಮಿಯಾದ ತೆಲಂಗಾಣ ರಾಜ್ಯದ ಕೊಲ್ಲಿಪಾಕಿ ಹೆಸರಿನಿಂದ ಕರಿಯುವ ಸುಕ್ಷೇತ್ರದಲ್ಲಿ ಶ್ರಾವಣ ಮಾಸದ 48ದಿನಗಳ ಕಾಲ ತಾಲೂಕಿನ ಸುಕ್ಷೇತ್ರ ಗುಂಡಕನಾಳ ಬೃಹನ್ಮಠದ ಪಟ್ಟಾಧ್ಯಕ್ಷರಾದ ಶ್ರೀ ಗುರುಲಿಂಗ ಶಿವಾಚಾರ್ಯರು ಲೋಕಕಲ್ಯಾಣಾರ್ಥವಾಗಿ ಮೌನಾನಷ್ಠಾನ ಕೈಗೊಳ್ಳಲಿದ್ದಾರೆ.

    ವಿಶೇಷವಾಗಿ ಮೂರು ವರ್ಷಕ್ಕೊಮ್ಮೆ ಬರುವ ಅಧಿಕ ಶ್ರಾವಣ ಮಾಸದಲ್ಲಿ ಈ ಅನುಷ್ಠಾನವನ್ನು ಶ್ರೀಗಳು ಕೈಗೊಳ್ಳುವರು. ಈ ಸಾರಿ ಜು. 23ರಿಂದ ಆಗಸ್ಟ 21ರವರೆಗೆ ಒಂದು ತಿಂಗಳ ಪರ್ಯಂತರ ಲೋಕಕಲ್ಯಾಣಾರ್ಥವಾಗಿ ಮೌನಾನುಷ್ಠಾನಕ್ಕೆ ಮುಂದಾಗಿದ್ದಾರೆ. ಈ ಹಿಂದೆ ಗುರುಲಿಂಗ ಶಿವಾಚಾರ್ಯರು ಬಂಡೆಪ್ಪನಹಳ್ಳಿಯ ಬಂಡಿ ಸ್ವಾಮಿಯ ಗದ್ದುಗೆಯಲ್ಲಿ 2007ನೇ ಸಾಲಿನಲ್ಲಿ 48 ದಿವಸಗಳ ಕಾಲ ನಿರಾಹಾರ ಮೌನಾನುಷ್ಠಾನ ಮಾಡಿದ್ದರು. 2016ನೇ ಸಾಲಿನಲ್ಲಿ ಗುಂಡಕನಾಳ ಗ್ರಾಮದ ಗುರುಲಿಂಗೇಶ್ವರ ಮಠದ ನೂತನ ಕಟ್ಟಡದ ಉದ್ಘಾಟನೆಯ ಸಮಯದಲ್ಲಿಯೂ 21 ದಿನಗಳ ಕಾಲ ಲೋಕಕಲ್ಯಾಣಾರ್ಥವಾಗಿ ನಿರಾಹಾರ ಮೌನಾನುಷ್ಠಾನ ಮಾಡಿದ್ದರು.

    ತ್ರಿಲಿಂಗ ದೇಶವಾದ ತೆಲಂಗಾಣದ ಕೊಲ್ಲಿಪಾಕಿಯ ಸೋಮೇಶ್ವರ ಲಿಂಗದಿಂದ ಆವಿರ್ಭವಿಸಿ ಕರ್ನಾಟಕದ ಮಲೆಯಾಚಲ ಪರ್ವತದ ಶ್ರೇಣಿಗೆ ದಯಮಾಡಿಸಿ ಅಗಸ್ತ್ಯ ಮಹರ್ಷಿಗೆ ಶಿವಾದ್ವೈತ ಸಿದ್ಧಾಂತವನ್ನು ಬೋಧಿಸಿ ಸಿದ್ಧಾಂತ ಶಿಖಾಮಣಿಯಂತ ಜ್ಞಾನಗಂಗೋತ್ರಿಯನ್ನು ಜಗದ್ಗುರು ರೇಣುಕಾಚಾರ್ಯರು ಪಸರಿಸಿದ್ದಾರೆ. ರಾವಣನ ಮೂರು ಕೋಟಿ ಲಿಂಗ ಸ್ಥಾಪನೆಯ ಸಂಕಲ್ಪವನ್ನು ಈಡೇರಿಸಿಕೊಟ್ಟ ರೇಣುಕಾಚಾರ್ಯರು ರಾವಣನ ಜೀವನವನ್ನು ಪಾವನಗೊಳಿಸಿ ಆತನ ಶಿವಭಕ್ತಿ ಹಾಗೂ ಶಿವನಿಷ್ಠೆಯನ್ನು ಜಗತ್ತಿಗೆ ತೋರಿದರು. ಚಂಡ ಪ್ರಚಂಡರನ್ನು ಉದ್ದರಿಸಿ ಅವರಿಗೂ ದಾರಿದೀಪವಾದವರು. ಕೊಲ್ಲಿಪಾಕಿಯಲ್ಲಿ ಕುಲ 18 ನೆಲೆಯ ಜನರನ್ನು ಸಂಘಟಿಸಿ ದೀಕ್ಷಾಧಿ ಧಾರ್ಮಿಕ ಸಂಸ್ಕಾರಗಳಿಂದ ಉದ್ದರಿಸಿದ ಕುರುಹುವಾಗಿ ಇಂದಿಗೂ ಕೂಡ ಅಷ್ಟಾದಶ ಮಠಗಳು ಅಲ್ಲಿ ಅಸ್ತಿತ್ವದಲ್ಲಿವೆ. ಇಂತಹ ಪಾವನ ನೆಲದಲ್ಲಿ ದೇಶದ ಜನರ ಒಳಿತಿಗಾಗಿ ತಾಳಿಕೋಟೆ ತಾಲೂಕಿನ ಗುಂಡಕನಾಳ ಹಿರೇಮಠದ ಗುರುಲಿಂಗ ಶಿವಾಚಾರ್ಯರು ಮೌನಾನುಷ್ಠಾನಕ್ಕೆ ಮುಂದಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts