ಚಿಕ್ಕಮಗಳೂರು: ಲಾಕ್ಡೌನ್ ಸಡಿಲಗೊಳಿಸಿದ ಬಳಿಕ ನಾಲ್ಕು ದಿನ ಕಳೆಯುತ್ತಿದ್ದಂತೆ ಜಿಲ್ಲಾದ್ಯಂತ ಕೆಎಸ್ಆರ್ಟಿಸಿ ಬಸ್ನಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಕ್ಷೀಣಿಸಿದ್ದು ಗಂಟೆಗೊಂದು ಬಸ್ ಸಂಚಾರವಾಗುತ್ತಿದೆ.
ಆರಂಭದಲ್ಲಿ 25 ರಿಂದ 30 ಪ್ರಯಾಣಿಕರು ಬಸ್ನಲ್ಲಿ ಸಂಚರಿಸುತ್ತಿದ್ದು, ಬುದ್ಧ ಪೂರ್ಣಿಮೆ ದಿನವಾದ ಗುರುವಾರ ಪ್ರಯಾಣಿಕರ ಸಂಖ್ಯೆಯಲ್ಲೂ ಕೊಂಚ ಇಳಿಮುಖವಾಗಿತ್ತು. ಶುಕ್ರವಾರ ಬೆಳಗ್ಗೆ 10 ಗಂಟೆವರೆಗೂ ಮೂರ್ನಾಲ್ಕು ಬಸ್ಗಳು ಸಂಚರಿಸಿರುವ ಮಾಹಿತಿ ಇದ್ದು ಮಧ್ಯಾಹ್ನದ ವೇಳೆಗೆ ಪ್ರತಿ ಬಸ್ನಲ್ಲೂ 20 ರಿಂದ 25 ಮಂದಿ ಪಯಣಿಸಿದ್ದು, 20ಕ್ಕೂ ಹೆಚ್ಚು ಬಸ್ಗಳು ಸಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಲವು ಬಸ್ಗಳು ಸಂಚಾರ ಮಾಡಿದ್ದು ಪ್ರಯಾಣಿಕರನ್ನು ಬಿಟ್ಟು ಬಂದಾಕ್ಷಣ ನಿಲ್ದಾಣದಲ್ಲಿ ವಾಹನಕ್ಕೆ ಸಂಪೂರ್ಣ ಔಷಧ ಸಿಂಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಓಡಾಡುವವರು ಶಿಕ್ಷಕರು, ಕೆಲವು ಸರ್ಕಾರಿ ನೌಕರರು ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರು, ತೋಟ ಕಾರ್ವಿುಕರು ಮಾತ್ರ. 25 ರಿಂದ 30 ಬಸ್ಗಳು ನಿಲ್ದಾಣದಲ್ಲಿ ನಿಂತಿದ್ದು ಪ್ರಯಾಣಿಕರಿಗಾಗಿ ಚಾಲಕ ನಿರ್ವಾಹಕರು ಕಾದು ಕುಳಿತಿರುವ ದೃಶ್ಯ ಕಂಡು ಬಂದಿತು.</