ಅಂಕೋಲಾ: ನಡುಗಡ್ಡೆಯಲ್ಲಿ ಅಪಾಯಕ್ಕೆ ಸಿಲುಕಿದ್ದ ಕಾಡು ಕುರಿಯ ಮರಿಯನ್ನು ಬೇಲೆಕೇರಿ ಕರಾವಳಿ ಕಾವಲುಪಡೆ ಪೊಲೀಸರು ಬುಧವಾರ ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಇನ್ಸ್ಪೆಕ್ಟರ್ ಶ್ರೀಧರ ಎಸ್.ಆರ್.ಹಾಗೂ ಸಿಬ್ಬಂದಿ ಅರಬ್ಬಿ ಸಮುದ್ರದಲ್ಲಿ ಗಸ್ತು ತಿರುಗುವಾಗ ಕೋಡಾರ ಸಮೀಪ ದ್ವೀಪದಿಂದ ಕೆಳಗೆ ಬಿದ್ದ ಪುಟ್ಟ ಜಿಂಕೆಯ ಮಾದರಿಯ ಮರಿ ಕಾಣಿಸಿತ್ತು. ಅದನ್ನು ಎತ್ತಿಕೊಂಡು ಬಂದು ಆರೈಕೆ ಮಾಡಿ, ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.